ಬೆಳವಣಿಕಿ (ರೋಣ): ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಸುರಿದ ಮಳೆಗೆ 30 ಮನೆಗಳು ಕುಸಿದಿವೆ. ಯಾವಗಲ್, ಮಲ್ಲಪೂರ, ಕೌಜಗೇರಿ, ಸಂದಿಗವಾಡ, ಬೆಳವಣಿಕಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಶೇಂಗಾ, ಉಳ್ಳಾಗಡ್ಡಿ, ಜೋಳ, ಹತ್ತಿ ಬೆಳೆಗಳು ಹಾನಿಯಾಗಿವೆ. ಜಮೀನಿಗೆ ನೀರು ನುಗ್ಗಿದ್ದರಿಂದ ಬದುಗಳು ಒಡೆದಿವೆ. ಚೆಕ್ಡ್ಯಾಂ, ಕೃಷಿಹೊಂಡ ತುಂಬಿ ಹರಿದಿವೆ.
ಹಿಂದೆ ಬರಗಾಲದಿಂದ ರೈತರು ತೀವ್ರ ತೊಂದರೆ ಅನುಭವಿಸಿದ್ದರು. ಸದ್ಯ ಸತತ ಮಳೆಯಿಂದಾಗಿ ಕಂಗಾಲಾಗಿದ್ದಾರೆ. ಹಿಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಅಡ್ಡಿಯಾಗಿದೆ ಎಂದು ರೈತ ಬಸವರಾಜ ವಡ್ಡಟ್ಟಿ ಅಳಲುತೋಡಿಕೊಂಡರು.
‘ಭರ್ಜರಿ ಮಳೆಯಾಗಿದ್ದರಿಂದ ಮನೆಗಳು ಕುಸಿದು ಬಿದ್ದಿವೆ. ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ. ಹಾನಿಗೊಳಗಾಗ ಮನೆಗಳ ಕುಟುಂಬದವರಿಗೆ ಸರ್ಕಾರ ಶೀಘ್ರವೇ ಪರಿಹಾರ ನೀಡಬೇಕು’ ಎಂದು ಗ್ರಾಮಸ್ಥ ಶರಣಪ್ಪ ಹದ್ಲಿ, ನಿಂಗಬಸಪ್ಪ ಮೆಣಸಿನಕಾಯಿ, ಬಸವಂತಪ್ಪ ಸುಣಗದ, ಹನಮಂತಪ್ಪ ಹೂಗಾರ, ಹುಚ್ಚಪ್ಪ ವಗ್ಗರ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.