ADVERTISEMENT

ಮೂತ್ರಾಲಯ ದುರಸ್ತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಮೇ 2018, 11:21 IST
Last Updated 22 ಮೇ 2018, 11:21 IST
ಕಾಲಕಾಲೇಶ್ವರ ವೃತ್ತದಲ್ಲಿರುವ ಮೂತ್ರಾಲಯ ಮಳೆಗೆ ಬಿದ್ದಿರುವುದು
ಕಾಲಕಾಲೇಶ್ವರ ವೃತ್ತದಲ್ಲಿರುವ ಮೂತ್ರಾಲಯ ಮಳೆಗೆ ಬಿದ್ದಿರುವುದು   

ಗಜೇಂದ್ರಗಡ: ಪಟ್ಟಣದ ಕಾಲ ಕಾಲೇಶ್ವರ ವೃತ್ತದಲ್ಲಿರುವ ಸಾರ್ವಜನಿಕ ಮೂತ್ರಾಲಯದ ಗೋಡೆ ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಮಳೆಗೆ ಬಿದ್ದು ವಾರ ಕಳೆದರೂ, ದುರಸ್ತಿ ಕಂಡಿಲ್ಲ.

ಇದರಿಂದ ಸ್ಥಳೀಯರು ಹಾಗೂ ಸುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ಜನರಿಗೆ ತೊಂದರೆ ತೀವ್ರ ಉಂಟಾಗುತ್ತಿದೆ.

‘ಪಟ್ಟಣದ ಹೃದಯ ಭಾಗದಂತಿರುವ ಕೆ.ಕೆ.ವೃತ್ತದಲ್ಲಿ ಇರುವುದು ಇದೊಂದೇ ಶೌಚಾಲಯ.ಇದೀಗ ಅದೂ ದುರಸ್ತಿಯಲ್ಲಿದೆ. ಹೀಗಗಿ ಸಾರ್ವಜನಿಕರು ರಸ್ತೆ ಪಕ್ಕದಲ್ಲೇ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಅದರಿಂದ ದುರ್ನಾತ ಹೊಮ್ಮುತ್ತಿದ್ದು, ಪುರಸಭೆಯು ಕೂಡಲೇ ಇದನ್ನು ದುರಸ್ತಿ ಮಾಡಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡಬೇಕು’ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ADVERTISEMENT

‘ಈ ಸಂಬಂಧ ಎಂಜಿನಿಯರ್ ಜೊತೆಗೆ ಮಾತನಾಡಿ, ಆದಷ್ಟು ಬೇಗ ಮೂತ್ರಾಲಯ ದುರಸ್ತಿ ಮಾಡಿಸಲಾಗುವುದು’ ಎಂದು ಪುರಸಭೆ ಮುಖ್ಯಾಧಿಕಾರಿ ಹನುಮಂತಮ್ಮ ನಾಯಕ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.