ಮುಳಗುಂದ: ಸಮೀಪದ ಹೊಸೂರು ಗ್ರಾಮದ ಬೂದಯ್ಯ ಹಿರೇಮಠ ಎಂಬಾತನ ಮನೆಯ ಮೇಲೆ ದಾಳಿ ನಡೆಸಿರುವ ಕೃಷಿ ಇಲಾಖೆ ಜಾರಿ ದಳದ ಸಿಬ್ಬಂದಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 40 ಚೀಲ ಯೂರಿಯಾ ಗೊಬ್ಬರವನ್ನು ವಶಪಡಿಸಿಕೊಂಡಿದ್ದಾರೆ. ದಾಖಲೆ ನೀಡುವಂತೆ ಬೂದಯ್ಯ ಅವರಿಗೆ ಸೂಚನೆ ನೀಡಿದ್ದಾರೆ.
ರೈತರೊಬ್ಬರು ನೀಡಿದ ದೂರು ಆಧರಿಸಿ ದಾಳಿ ನಡೆಸಲಾಗಿದೆ ಎಂದು ಗದಗ ಜಾರಿ ದಳದ ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್ಲ ತಿಳಿಸಿದ್ದಾರೆ.
ಕೆಲವು ಅಧಿಕೃತ ಮಾರಾಟಗಾರರು ಹೆಚ್ಚು ಹಣ ಪಡೆದು ಯೂರಿಯಾ ಮಾರಾಟ ಮಾಡುತ್ತಿರುವ
ಆರೋಪ ಇದೆ. ಹೆಚ್ಚಿನ ದರಕ್ಕೆ ಹಾಗೂ ರಸೀದಿ ಇಲ್ಲದೆ ಮಾರಾಟ ಮಾಡುವುದು ಕಂಡು ಬಂದಲ್ಲಿ ಅಂತವರ ಮೇಲೆಯು ಕ್ರಮ ಜರುಗಿಸುತ್ತೇವೆ. ಪ್ರತಿ ರೈತನಿಗೆ 2 ಚೀಲ ಮಾರಾಟ ಮಾಡಬೇಕು. ತೇವಾಂಶದ ಕಾರಣದಿಂದ ರೈತರು ಹೆಚ್ಚು ಯೂರಿಯಾ ಉಪಯೋಗ ಮಾಡುತ್ತಿದ್ದು ಅದಕ್ಕಾಗಿ ಕೊರತೆ ಉಂಟಾಗಿದೆ ಎಂದರು.
ಅಕ್ರಮ ಎಸಗುವವರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆಯಡಿಯಲ್ಲಿ 5 ವರ್ಷಗಳ ಶಿಕ್ಷೆ ಹಾಗೂ
ದಂಡವನ್ನು ವಿಧಿಸಬಹುದಾಗಿದೆ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.