ADVERTISEMENT

ಮಾದಕ ದ್ರವ್ಯ: ದುಷ್ಪರಿಣಾಮದ ಅರಿವು

​ಪ್ರಜಾವಾಣಿ ವಾರ್ತೆ
Published 27 ಜೂನ್ 2025, 16:28 IST
Last Updated 27 ಜೂನ್ 2025, 16:28 IST
ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ರೋಣ ತಾಲ್ಲೂಕಿನ ಬೆಳವಣಕಿ ಬಸ್‌ ನಿಲ್ದಾಣದಲ್ಲಿ ಜನಜಾಗೃತಿ ಮೂಡಿಸಲಾಯಿತು
ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನದ ಅಂಗವಾಗಿ ರೋಣ ತಾಲ್ಲೂಕಿನ ಬೆಳವಣಕಿ ಬಸ್‌ ನಿಲ್ದಾಣದಲ್ಲಿ ಜನಜಾಗೃತಿ ಮೂಡಿಸಲಾಯಿತು   

ಬೆಳವಣಕಿ (ರೋಣ): ಬೆಳವಣಕಿ ಹಾಗೂ ಯಾವಗಲ್‌ ಗ್ರಾಮದಲ್ಲಿ ರೋಣ ಪೋಲಿಸ್‌ ಠಾಣೆ ವತಿಯಿಂದ ಅಂತರರಾಷ್ಟ್ರೀಯ ಮಾದಕ ದ್ರವ್ಯ ವಿರೋಧಿ ದಿನ ಆಚರಿಸಲಾಯಿತು.

ಸ್ಥಳೀಯ ಬಸ್‌ ನಿಲ್ದಾಣದ ಹತ್ತಿರ ಮಾದಕ ದ್ರವ್ಯ ವಸ್ತುಗಳ ಸೇವನೆಯಿಂದಾಗು ದುಷ್ಪರಿಣಾಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಲಾಯಿತು.

ಪೊಲೀಸ್‌ ಇಲಾಖೆ ಸಿಬ್ಬಂದಿ ಆನಂದ ಮೇಟಿ ಮಾತನಾಡಿ, ‘ಮಾದಕ ದ್ರವ್ಯಗಳ ಸೇವನೆ ಮತ್ತು ಕಳ್ಳ ಸಾಗಣೆ ಅಪರಾಧವಾಗಿದೆ. ಇದು ವ್ಯಕ್ತಿಯಷ್ಟೇ ಅಲ್ಲದೆ ಕುಟುಂಬ ಹಾಗೂ ಸಮಾಜದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಯುವಜನರು ಮಾದಕ ವಸ್ತುಗಳಿಂದ ದೂರವಿದ್ದು, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು’ ಎಂದರು.

ADVERTISEMENT

ಯಾವಗಲ್‌ ಗ್ರಾಮದ ಶಿಕ್ಷಣ ಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಆರೋಗ್ಯಕರ ಜೀವನಶೈಲಿ ಆಯ್ಕೆ ಮಾಡುವಂತೆ ಹಾಗೂ ಮಾದಕ ವಸ್ತು ಸೇವನೆಯಿಂದ ದೂರವಿರುವಂತೆ ಅರಿವು ಮೂಡಿಸಲಾಯಿತು.

ಹೇಮಣ್ಣ ಅಳಗವಾಡಿ, ಅಲ್ಲಾಸಾಹೇಬ, ಮಾರುತಿ ಕಮ್ಮಾರ, ನಾಗಪ್ಪ ಮಾದರ, ಶರಣಪ್ಪ ವಡ್ಡಟ್ಟಿ, ರಾಜೇಸಾಬ್‌ ನದಾಫ್‌, ಹುಸೇನಸಾಬ್‌ ಕುರ್ಲಗೇರಿ, ಶರಣಪ್ಪ ದಾನಿ, ಮುತ್ತು ನಂದಿಕೋಲ, ಫರಿದಸಾಬ್‌ ಅತ್ತಾರ, ಗುರುರಾಜ ಶೆಟ್ಟರ, ಮಾರುತಿ ಸಣಕಲ್‌ ಇದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.