ADVERTISEMENT

ಭಕ್ತರ ಉದ್ಧಾರಕ್ಕೆ ಶ್ರಮಿಸಿ: ತೋಂಟದ ಶ್ರೀ, ಅನ್ನದಾನೇಶ್ವರ ಪುರಾಣ ಮಂಗಲೋತ್ಸವ

ಅನ್ನದಾನೇಶ್ವರ ಪುರಾಣ ಮಂಗಲೋತ್ಸವ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2021, 4:42 IST
Last Updated 9 ನವೆಂಬರ್ 2021, 4:42 IST
ನರೇಗಲ್‌ ಸಮೀಪದ ಹಾಲಕೆರೆಯಲ್ಲಿ ನಡೆದ ಅನ್ನದಾನೇಶ್ವರ ಮಹಾಪುರಾಣ ಮಂಗಲೋತ್ಸವದಲ್ಲಿ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.
ನರೇಗಲ್‌ ಸಮೀಪದ ಹಾಲಕೆರೆಯಲ್ಲಿ ನಡೆದ ಅನ್ನದಾನೇಶ್ವರ ಮಹಾಪುರಾಣ ಮಂಗಲೋತ್ಸವದಲ್ಲಿ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಆಶೀರ್ವಚನ ನೀಡಿದರು.   

ನರೇಗಲ್: ‘ಭಕ್ತರು ಸ್ವಾಮಿಗಳನ್ನು ತಮ್ಮ ಮಕ್ಕಳಂತೆ ಪ್ರೀತಿಸಬೇಕು ಹಾಗೂ ಶ್ರೀಗಳು ಭಕ್ತರ ಉದ್ಧಾರಕ್ಕಾಗಿ ಶ್ರಮಿಸಬೇಕು’ ಎಂದು ಗದಗ-ಡಂಬಳ ತೋಂಟದಾರ್ಯ ಮಠದ ತೋಂಟದ ಸಿದ್ಧರಾಮ ಸ್ವಾಮೀಜಿ ಹೇಳಿದರು.

ಇಲ್ಲಿಗೆ ಸಮೀಪದ ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಮಠದಲ್ಲಿ ನಡೆಯುತ್ತಿರುವ ಅಭಿನವ ಅನ್ನದಾನ ಸ್ವಾಮೀಜಿ ಅವರ ಗುರುವಂದನೆ ಹಾಗೂ ಮುಪ್ಪಿನ ಬಸವಲಿಂಗ ದೇವರ ನಿರಂಜನ ಚರಪಟ್ಟಾಧಿಕಾರ ಕಾರ್ಯಕ್ರಮದ ಅಂಗವಾಗಿ ಸೋಮವಾರ ನಡೆದ ಅನ್ನದಾನೇಶ್ವರ ಮಹಾಪುರಾಣದ ಮಂಗಲೋತ್ಸವದಲ್ಲಿ ಅವರು ಆಶೀರ್ವಚನ ನೀಡಿದರು.

‘ಪ್ರತಿಭಾ ಸಂಪನ್ನರಾಗಿರುವ ಮುಪ್ಪಿನ ಬಸವಲಿಂಗ ದೇವರು ತಮ್ಮ ಗುರುವಿನ ಗರಡಿಯಲ್ಲಿ ಪಳಗಿದ್ದಾರೆ. ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ರಾಂತಿಯನ್ನು ಮಾಡಿರುವ ಅನ್ನದಾನೇಶ್ವರ ಮಠದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸುತ್ತಾರೆ. ಅವರ ಕಷ್ಟ, ನಷ್ಟ, ಅಭಿವೃದ್ಧಿ ಕಾರ್ಯಗಳಿಗೆ ಭಕ್ತರು ಪ್ರೀತಿ ತೋರುವ ಮೂಲಕ ಸಹಕರಿಸಬೇಕು’ ಎಂದರು.

ADVERTISEMENT

ಮಂಗಲನುಡಿಯನ್ನು ಡಾ. ಈಶ್ವರ ಮಂಟೂರ ಅವರು ನೀಡಿದರು. ಡಾ. ಅಭಿನವ ಅನ್ನದಾನ ಸ್ವಾಮೀಜಿ, ವಳಬಳ್ಳಾರಿಯ ಸುವರ್ಣಗಿರಿಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಭಾತಂಭ್ರಾ ಭಾಲ್ಕಿ ನಿರಂಜನ ಸಂಸ್ಥಾನ ಮಠದ ಶಿವಯೋಗಿಶ್ವರ ಸ್ವಾಮೀಜಿ, ಧಾರವಾಡ ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಲಿಂಗನಾಯಕನ ಹಳ್ಳಿಯ ಜಂಗಮಲಿಂಗ‌ ಕ್ಷೇತ್ರದ ಚೆನ್ನವೀರ ಸ್ವಾಮೀಜಿ, ಆಡಿಅಂದಿಗನೂರ ಸಿದ್ಧೇಶ್ವರ ಮಠದ ಶಿವಾನಂದ ಸ್ವಾಮೀಜಿ, ಅಡವಿ ಅಮರೇಶ್ವರದ ಶಾಂತಮಲ್ಲ ಸ್ವಾಮೀಜಿ, ನೀಲಗುಂದ ಗುಡ್ಡ ಮಠದ ಚನ್ನಬಸವ ಸ್ವಾಮೀಜಿ, ಬೆಕ್ಕಿನ‌ಕಲ್ಲಮಠ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ನಂದವಾಡಗಿ ಹಿರೇಮಠದ ಚನ್ನಬಸವ ಸ್ವಾಮೀಜಿ, ನಿಯೋಜಿತ ಉತ್ತರಾಧಿಕಾರಿ ಮುಪ್ಪಿನ ಬಸವಲಿಂಗ ದೇವರು, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಮಾಜಿ ಶಾಸಕ ಜಿ.ಎಸ್.‌ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.