ADVERTISEMENT

ಸಂಭ್ರಮದ ತೋಂಟದಾರ್ಯ ಮಠದ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 15:00 IST
Last Updated 19 ಏಪ್ರಿಲ್ 2019, 15:00 IST
ಗದುಗಿನಲ್ಲಿ ಶುಕ್ರವಾರ ಸಂಜೆ ತೋಂಟದಾರ್ಯ ಮಠದ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು
ಗದುಗಿನಲ್ಲಿ ಶುಕ್ರವಾರ ಸಂಜೆ ತೋಂಟದಾರ್ಯ ಮಠದ ರಥೋತ್ಸವ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು   

ಗದಗ: ಇಲ್ಲಿನ ತೋಂಟದಾರ್ಯ ಮಠದ ರಥೋತ್ಸವ ಶುಕ್ರವಾರ ಸಂಜೆ ಚಿತ್ತಾ ನಕ್ಷತ್ರದಲ್ಲಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಸಂಭ್ರಮದಿಂದ ನಡೆಯಿತು. ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ ಅವರು ರಥೋತ್ಸವಕ್ಕೆ ಚಾಲನೆ ನೀಡಿದರು.

ಮಠದ ಆವರಣದಿಂದ ಭಕ್ತರು, ಕಮಾನಿನವರೆಗೆ ತೇರನ್ನು ಎಳೆದರು. ತೇರಿಗೆ ಉತ್ತತಿ, ಲಿಂಬೆಹಣ್ಣು ಹಾಗೂ ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.ತೋಂಟದ ಅಜ್ಜನ ಪರವಾಗಿ ಘೋಷಣೆಗಳು ಮೊಳಗಿದವು.

ರಥೋತ್ಸವಕ್ಕೂ ತೋಂಟದ ಸಿದ್ಧರಾಮ ಶ್ರೀಗಳ ಮೆರವಣಿಗೆ ನಡೆಯಿತು. ಎಸ್.ಎಸ್. ಕಳಸಾಪೂರ ಶೆಟ್ಟರ ಮನೆಯಿಂದ ಆರಂಭವಾದ ಮೆರವಣಿಗೆ ಸರಾಫ್ ಬಜಾರ, ಬಸವೇಶ್ವರ ವೃತ್ತ, ಹುಯಿಲಗೋಳ ನಾರಾಯಣ ರಾವ್ ವೃತ್ತ, ಮಹೇಂದ್ರಕರ್‌ ವೃತ್ತದ ಮೂಲಕ ಮಠಕ್ಕೆ ಬಂದು ತಲುಪಿತು. ಜಾಂಜ್‌ ಮೇಳ, ಕರಡಿ ಮಜಲು ಸೇರಿದಂತೆ ವಿವಿಧ ವಾದ್ಯ ಮೇಳಗಳು, ಜನಪದ ಕಲಾ ತಂಡಗಳು ಮೆರವಣಿಗೆಗೆ ಮೆರುಗು ತಂದವು.

ADVERTISEMENT

ಮಠದ ಜಾತ್ರೆಯು ಸಾಹಿತ್ಯ, ಕೃಷಿ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ರಥೋತ್ಸವಕ್ಕೂ ಮುನ್ನವೇ ಆರಂಭಗೊಳ್ಳುವ ಜಾತ್ರೆ ಒಂದೂವರೆ ತಿಂಗಳು ನಡೆಯುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.