ADVERTISEMENT

ಜಿಲ್ಲೆಯಲ್ಲಿ ಐದು ನಾಮಪತ್ರ ವಾಪಸ್

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 9:56 IST
Last Updated 20 ಏಪ್ರಿಲ್ 2013, 9:56 IST

ಹಾಸನ: ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳಿಗೆ ಅರ್ಜಿ ಸಲ್ಲಿಸಿದ್ದ ಒಟ್ಟು ಐವರು ಅಭ್ಯರ್ಥಿಗಳು ಶುಕ್ರವಾರ ತಮ್ಮ ನಾಮಪತ್ರ ಹಿಂತೆಗೆದುಕೊಂಡಿದ್ದಾರೆ.

ಶ್ರವಣಬೆಳಗೊಳ ಕ್ಷೇತ್ರದಲ್ಲಿ ಕೆ.ಜೆ.ಪಿ. ಅಭ್ಯರ್ಥಿ ಯಾಗಿ ನಾಮಪತ್ರ ಸಲ್ಲಿಸಿದ್ದ ಎಂ.ಎ. ಗೋಪಾಲಸ್ವಾಮಿ, ಪಕ್ಷೇತರ ಅಭ್ಯರ್ಥಿಗಳಾಗಿದ್ದ ಬಿ.ಆರ್.ಬಾಲಕೃಷ್ಣ ಉರುಫ್ ಚಂದ್ರು ಹಾಗೂ ಅನಿಲ್ ಕುಮಾರ್ ಜಿ.ಬಿ.  ನಾಮಪತ್ರ ಹಿಂಪಡೆದಿದ್ದಾರೆ.
ಅರಸೀಕೆರೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಲಲಿತಾ ಜಯಣ್ಣ, ಅರಕಲಗೂಡು ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎನ್. ಕವಿತಾ ನಾಮಪತ್ರ ವಾಪಸ್ ಪಡೆದಿದ್ದಾರೆ.

ಕಣದಲ್ಲಿ ಉಳಿದಲಿಂಗೇಶ್
ಬೇಲೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ     ಕೆ.ಎಸ್. ಲಿಂಗೇಶ್ ಕಣದಲ್ಲಿ     ಉಳಿದಿದ್ದಾರೆ.

ಪಕ್ಷ ಕೊನೆಯ ಕ್ಷಣದಲ್ಲಿ ನೀಡಿದ್ದ ಬಿ-ಫಾರ್ಮ್‌ನಲ್ಲಿ ಲಿಂಗೇಶ್ ಅಧಿಕೃತ ಅಭ್ಯರ್ಥಿ ಹಾಗೂ ಬಿ.ಸಿ. ಮಂಜುನಾಥ್ ಡಮ್ಮಿ ಅಭ್ಯರ್ಥಿ ಎಂದು ನಮೂದಿಸಿದ್ದರಿಂದ ಮಂಜುನಾಥ್ ಅವರ ನಾಮಪತ್ರ ತಿರಸ್ಕೃತಗೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.