ADVERTISEMENT

ಹಾಸನ ಜಿಲ್ಲೆ: ಒಂಟಿ ಮಹಿಳೆ ಕೊಲೆ; ದರೋಡೆ ಪ್ರಕರಣ – ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 12:47 IST
Last Updated 4 ಅಕ್ಟೋಬರ್ 2017, 12:47 IST
ಹಾಸನ ಜಿಲ್ಲೆ: ಒಂಟಿ ಮಹಿಳೆ ಕೊಲೆ; ದರೋಡೆ ಪ್ರಕರಣ – ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ
ಹಾಸನ ಜಿಲ್ಲೆ: ಒಂಟಿ ಮಹಿಳೆ ಕೊಲೆ; ದರೋಡೆ ಪ್ರಕರಣ – ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ   

ಹಾಸನ: ಒಂಟಿ ಮಹಿಳೆ ಕೊಲೆ ಮಾಡಿ ಚಿನ್ನಾಭರಣ ದರೋಡೆ ಮಾಡಿದ್ದ ನಾಲ್ವರು ಅಪರಾಧಿಗಳಿಗೆ ಹಾಸನದ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಮೂರ್ತಿ ಶ್ಯಾಮ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.

ಬಿ.ಚೋಳೇನಹಳ್ಳಿಯ ಮನು, ಮಂಜ, ಸುನಿಲ್, ಬೆಂಗಳೂರಿನ ಹೊಸಕೇರಹಳ್ಳಿಯ ಮಂಜ ಶಿಕ್ಷಿತರು.

ಅಪರಾಧಿಗಳಿಗೆ ತಲಾ ₹75 ಸಾವಿರ ದಂಡ ವಿಧಿಸಲಾಗಿದೆ.

ADVERTISEMENT

2013ರ ಸೆ.30ರಂದು ಚಿನ್ನಹೊನ್ನೇನಹಳ್ಳಿಯ ಮನೆಗೆ ನುಗ್ಗಿ ತೇಜಸ್ವಿನಿ ಎಂಬುವರನ್ನು ಹತ್ಯೆ ಮಾಡಿ ಚಿನ್ನಾಭರಣ ದೋಚಿದ್ದರು.

ಈ ಸಂಬಂಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು

ಸರ್ಕಾರದ ಪರವಾಗಿ ಅಭಿಯೋಜಕ ಜಯರಾಮ ಶೆಟ್ಟಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.