ADVERTISEMENT

ಚನ್ನರಾಯಪಟ್ಟಣ | ‘ಯೋಧರ ಮಕ್ಕಳಿಗೆ ಶೇ 20 ಶುಲ್ಕ ವಿನಾಯಿತಿ’

​ಪ್ರಜಾವಾಣಿ ವಾರ್ತೆ
Published 27 ಜುಲೈ 2024, 13:56 IST
Last Updated 27 ಜುಲೈ 2024, 13:56 IST
ಚನ್ನರಾಯಪಟ್ಟಣದ ಪೂರ್ಣಚಂದ್ರ ಪಬ್ಲಿಕ್ ಶಾಲೆಯಲ್ಲಿ ನಿವೃತ್ತ ಯೋಧರಾದ ಗೋಪಿ, ನಾಗರಾಜು ಅವರನ್ನು ಆಶಾ ಸನ್ಮಾನಿಸಿದರು
ಚನ್ನರಾಯಪಟ್ಟಣದ ಪೂರ್ಣಚಂದ್ರ ಪಬ್ಲಿಕ್ ಶಾಲೆಯಲ್ಲಿ ನಿವೃತ್ತ ಯೋಧರಾದ ಗೋಪಿ, ನಾಗರಾಜು ಅವರನ್ನು ಆಶಾ ಸನ್ಮಾನಿಸಿದರು   

ಚನ್ನರಾಯಪಟ್ಟಣ: ಪಟ್ಟಣದ ಪೂರ್ಣಚಂದ್ರ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದಲ್ಲಿ ನಿವೃತ್ತ ಯೋಧರಾದ ಗೋಪಿ ಮತ್ತು ನಾಗರಾಜು ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಆಶಾ ಮಾತನಾಡಿ, ‘ದೇಶಕ್ಕೆ ಸೈನಿಕರ ಕೊಡುಗೆ ದೊಡ್ಡರು. ಕ್ಲಿಷ್ಟಕರ ಪರಿಸ್ಥಿತಿಯಲ್ಲೂ ಎದೆಗುಂದದೆ ಹೋರಾಟ ಮಾಡಿ ಮಾತೃಭೂಮಿಯನ್ನು ಸಂರಕ್ಷಿಸುತ್ತಾರೆ. ಯೋಧರ ಮಕ್ಕಳಿಗೆ ಶಾಲೆಯಲ್ಲಿ ಶೇ 20ರಷ್ಟು ಶುಲ್ಕ ವಿನಾಯಿತಿ ನೀಡಲಾಗುವುದು’ ಎಂದು ಘೋಷಿಸಿದರು.

ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.