ಸಕಲೇಶಪುರ: ತಾಲ್ಲೂಕಿನ ಬೈಕೆರೆ ಎಸ್ಟೇಟ್ಗೆ ಶುಕ್ರವಾರ 20ಕ್ಕೂ ಹೆಚ್ಚು ಕಾಡಾನೆಗಳು ನುಗ್ಗಿದ್ದರಿಂದಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾನಿ ಮಾಡಿವೆ.
ಕಾಡಾನೆಗಳು ಕೆಲವು ತಿಂಗಳಿಂದ ಬೈಕೆರೆ, ನಾಗರ, ಸುಂಡೇಕೆರೆ, ಹಲಸುಲಿಗೆ, ಕಾಟಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಬೀಡು ಬಿಟ್ಟಿದ್ದು, ಬೆಳೆ ಹಾಗೂ ಆಸ್ತಿ ಹಾನಿ ಮಾಡುತ್ತಿವೆ.
ಬೈಕೆರೆ ಎಸ್ಟೇಟ್ನಲ್ಲಿ 200ಕ್ಕೂ ಹೆಚ್ಚು ಅಡಿಕೆ, ಕಾಫಿ ಗಿಡಗಳು, ತೋಟದ ಬೇಲಿ, ಕೆರೆಯ ಏರಿಗಳನ್ನು ನಾಶ ಮಾಡಿವೆ. ಕಾಗಿನಹರೆ ಕೃಷ್ಣೇಗೌಡ ತೋಟದಲ್ಲಿ 100 ಅಡಿಕೆ ಗಿಡಗಳು, 50 ಕಾಫಿ ಗಿಡಗಳನ್ನು ನಾಶ ಮಾಡಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.