ADVERTISEMENT

ಚಿರತೆ ದಾಳಿಗೆ ಎರಡು ಕುರಿ, ಕರು ಬಲಿ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2018, 13:03 IST
Last Updated 8 ಡಿಸೆಂಬರ್ 2018, 13:03 IST
ಚಿರತೆ ದಾಳಿಗೆ ಬಲಿಯಾದ ಕುರಿ
ಚಿರತೆ ದಾಳಿಗೆ ಬಲಿಯಾದ ಕುರಿ   

ಹಾಸನ: ಚಿರತೆ ದಾಳಿಗೆ ಎರಡು ಕುರಿ ಹಾಗೂ ಒಂದು ಕರು ಬಲಿಯಾಗಿರುವ ಘಟನೆ ತಾಲ್ಲೂಕಿನ ಸೋಮನಹಳ್ಳಿ ಗೇಟ್ ಬಳಿ ನಡೆದಿದೆ.

ನಗರದ ಹೊರವಲಯದ ಸೋಮನಹಳ್ಳಿ ಬಳಿಯ ನಾಗರಾಜು ಎಂಬುವರ ಕೋಳಿ ಫಾರಂ ಗೆ ಮಧ್ಯರಾತ್ರಿ 1.30ರ ಸಮಯದಲ್ಲಿ ನುಗ್ಗಿದ ಚಿರತೆ ಎರಡು ಕುರಿ ಹಾಗೂ ಒಂದು ಕರುವಿನ ಕುತ್ತಿಗೆ ಭಾಗಕ್ಕೆ ಬಾಯಿ ಹಾಕಿ ರಕ್ತಹೀರಿ ಸಾಯಿಸಿದೆ. ದನಕರುಗಳ ಚೀರಾಟ ಕೇಳಿ ನಾಗರಾಜು, ಅವರ ಪತ್ನಿ ಶಾಂತಮ್ಮ ಫಾರಂ ಒಳಗೆ ಹೋದಾಗ ಗಾಬರಿಯಿಂದ ಚಿರತೆ ಅಲ್ಲಿಂದ ಓಡಿ ಹೋಗಿದೆ.

ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮದೊಳಗೆ ಆಹಾರ ಅರಸಿ ಬಂದು ಜಾನುವಾರಗಳನ್ನು ಬಲಿ ತೆಗೆದುಕೊಂಡಿರುವುದು ಸ್ಥಳೀಯರ ನಿದ್ದೆಗೆಡಿಸಿದೆ. ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.