ಹಿರೀಸಾವೆ: ಹೋಬಳಿಯ ಕೊತ್ತನ ಹಳ್ಳಿ ಗ್ರಾಮದಲ್ಲಿ 2 ವರ್ಷದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಶನಿವಾರ ಸೆರೆ ಹಿಡಿದಿದ್ದಾರೆ.
ಗ್ರಾಮದ ತೋಟದ ಮನೆಗಳ ಬಳಿ ಆಗಾಗ ಚಿರತೆ ಬಂದು ನಾಯಿ, ಕುರಿ, ಕೋಳಿಗಳನ್ನು ತಿನ್ನುತ್ತಿತ್ತು. ಈ ಬಗ್ಗೆ ಅರಣ್ಯ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದರು. ಹತ್ತು ದಿನಗಳ ಹಿಂದೆ ಪ್ರಭಾಕರ್ ಎಂಬುವವರ ತೋಟದ ಮನೆಯ ಪಕ್ಕದಲ್ಲಿ ಬೋನು ಇಡಲಾಗಿತ್ತು. ಶನಿವಾರ ಬೆಳಿಗ್ಗೆ ಚಿರತೆ ಸೆರೆಯಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎಚ್.ಆರ್.ಹೇಮಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
ಚಿರತೆಯನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾಡಿಗೆ ಬಿಡಲಾಗುವುದು
ಎಂದು ಇಲಾಖೆಯ ವಿಶ್ವನಾಥ ಹೇಳಿದರು.
ಅರಣ್ಯ ರಕ್ಷಕ ಕರೀಗೌಡ ಮತ್ತಿತರರು ಸೆರೆ ಸಿಕ್ಕ ಚಿರತೆಯನ್ನು ಕೊತ್ತನಹಳ್ಳಿಯಿಂದ ಚನ್ನರಾಯಪಟ್ಟಣಕ್ಕೆ ವಾಹನದಲ್ಲಿ ಸಾಗಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.