ಹಳೇಬೀಡು: ರಾಜಗೆರೆಯ ಒಡ್ಡಿನಕೆರೆ ಮಂಗಳವಾರ ಕೋಡಿ ಬಿದ್ದಿದೆ. ಮಾದಿಹಳ್ಳಿ ಹೋಬಳಿಯ ಬೆಟ್ಟದಾಲೂರು, ಹೊಲಬಗೆರೆ ಭಾಗದಲ್ಲಿ ಮಳೆ ಸುರಿದಿದ್ದರಿಂದ ಒಡ್ಡಿನ ಕೆರೆ ಭರ್ತಿಯಾಗಿತ್ತು.
ಕೋಡಿ ನೀರು ಹಳೇಬೀಡಿನ ದ್ವಾರಸಮುದ್ರ ಕೆರೆಗೆ ತಲುಪಿದೆ. ಮೇ ತಿಂಗಳ ಅಂತ್ಯದಲ್ಲಿಯೇ ಒಡ್ಡಿನ ಕೆರೆ ಭರ್ತಿಯಾಗಿದೆ. ಮಳೆ ಇದೇ ರೀತಿ ಮುಂದುವರಿದರೆ ದ್ವಾರಸಮುದ್ರ ಕೆರೆ ಈ ವರ್ಷ ಬೇಗ ಭರ್ತಿಯಾಗುವ ಸಾಧ್ಯತೆ ಇದೆ ಎಂದು ಸ್ಥಳೀಯರು ತಿಳಿಸಿದರು. ಎತ್ತಿನಹೊಳೆ ನಾಲೆಯಲ್ಲಿ ನಿಂತಿರುವ ಮಳೆ ನೀರನ್ನು ಹಳ್ಳಕ್ಕೆ ಹರಿಸಿರುವುದರಿಂದ ಒಡ್ಡಿನಕೆರೆ ಬೇಗ ಭರ್ತಿಯಾಗಿದೆ ಎಂದು ರಾಜಗೆರೆ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.