ADVERTISEMENT

ನಗರದಲ್ಲಿ ಅಬ್ಬರಿಸಿದ ವರುಣ

​ಪ್ರಜಾವಾಣಿ ವಾರ್ತೆ
Published 18 ಜುಲೈ 2019, 5:54 IST
Last Updated 18 ಜುಲೈ 2019, 5:54 IST
ಹಾಸನದಲ್ಲಿ ಮಳೆ ಸುರಿದ ವೇಳೆ ಮಹಿಳೆಯರು ಕೊಡೆ ಹಿಡಿದು ಮಹಿಳೆಯರು ಸಾಗಿದರು.
ಹಾಸನದಲ್ಲಿ ಮಳೆ ಸುರಿದ ವೇಳೆ ಮಹಿಳೆಯರು ಕೊಡೆ ಹಿಡಿದು ಮಹಿಳೆಯರು ಸಾಗಿದರು.   


ಹಾಸನ: ಹಲವು ದಿನಗಳ ವಿಶ್ರಾಂತಿ ಬಳಿಕ ನಗರದಲ್ಲಿ ಬುಧವಾರ ಮಧ್ಯಾಹ್ನ ವರುಣ ಅಬ್ಬರಿಸಿದ.

ಮಧ್ಯಾಹ್ನ 12ರ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಕ್ರಮೇಣ ಜೋರಾಗಿ ಬೀಳಲು ಆರಂಭಿಸಿತು. ಸುಮಾರು ಒಂದು ತಾಸಿಗೂ ಹೆಚ್ಚು ಸುರಿದ ಕಾರಣ ರಸ್ತೆಯಲ್ಲಿ ನೀರು ನಿಂತು ಸಾರ್ವಜನಿಕರು ಹಾಗೂ ವಾಹನ ಸವಾರರು ಪರದಾಡಿದರು. ಜನಜೀವನವೂ ಅಸ್ತವ್ಯಸ್ತಗೊಂಡಿತು.

ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಬಿ.ಎಂ. ರಸ್ತೆ, ರೈಲ್ವೆ ನಿಲ್ದಾಣ ರಸ್ತೆ ಹಾಗೂ ಇತರ ಬಡಾವಣೆಗಳಲ್ಲಿ ರಸ್ತೆಯಲ್ಲಿ ನೀರು ನಿಂತ ಪರಿಣಾಮ ಸಾಕಷ್ಟು ತೊಂದರೆ ಆಯಿತು. ಮಾರುಕಟ್ಟೆಯಲ್ಲೂ ನೀರು ನಿಂತು ಕೆಸರು ಗದ್ದೆಯಂತೆ ಆಗಿತ್ತು. ಸಂಜೆ ಮತ್ತೆ ಜಿಟಿಜಿಟಿ ಮಳೆಯಾಯಿತು.

ADVERTISEMENT

ದಿಢೀರ್‌ ಮಳೆಯಿಂದಾಗಿ ಹಲವರು ತೊಯ್ದುಕೊಂಡು ಮನೆಗೆ ಹೋಗಬೇಕಾಯಿತು. ಮರ ಹಾಗೂ ಕಟ್ಟಡಗಳ ಕೆಳಗೆ ಆಶ್ರಯ ಪಡೆದರೇ, ಇನ್ನು ಕೆಲವರು ಕೊಡೆ ಹಿಡಿದು ಸಾಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.