ADVERTISEMENT

‘ಪುಳಿಯೊಗರೆ’ ಶಿಕ್ಷಕ ವಿವಾದ: ಬಿಇಒ ಮದ್ಯಸ್ಥಿಕೆಯಲ್ಲಿ ಇತ್ಯರ್ಥ 

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2020, 15:16 IST
Last Updated 6 ಫೆಬ್ರುವರಿ 2020, 15:16 IST
ಸಕಲೇಶಪುರ ತಾಲ್ಲೂಕಿನ ಕಬ್ಬಿನಗದ್ದೆ ಗ್ರಾಮಕ್ಕೆ ಬಿಇಓ ಎಚ್‌.ಬಿ. ಶಿವಾನಂದ್‌ ಬುಧವಾರ ಭೇಟಿ ನೀಡಿ ಮಕ್ಕಳು ಶಾಲೆಗೆ ಬರುವಂತೆ ಮನವೊಲಿಸಿದರು
ಸಕಲೇಶಪುರ ತಾಲ್ಲೂಕಿನ ಕಬ್ಬಿನಗದ್ದೆ ಗ್ರಾಮಕ್ಕೆ ಬಿಇಓ ಎಚ್‌.ಬಿ. ಶಿವಾನಂದ್‌ ಬುಧವಾರ ಭೇಟಿ ನೀಡಿ ಮಕ್ಕಳು ಶಾಲೆಗೆ ಬರುವಂತೆ ಮನವೊಲಿಸಿದರು   

ಸಕಲೇಶಪುರ: ಪುಳಿಯೊಗರೆ ಶಬ್ದ ಹೇಳಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದ ತಾಲ್ಲೂಕಿನ ಕಬ್ಬಿನಗದ್ದೆ ಸರ್ಕಾರಿ ಶಾಲೆಯ ಸಮಸ್ಯೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಚ್‌.ಬಿ. ಶಿವಾನಂದ್‌ ಸೌಹಾರ್ದಯುತವಾಗಿ ಬಗೆಹರಿಸಿದ್ದಾರೆ.

ಪ್ರಕರಣದ ಶಿಕ್ಷಕ ನಿರ್ವಾಣಪ್ಪ ಅಮಾನತ್ತಿಗೆ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ ಅದೇ ಶಾಲೆಗೆ ಪುನಃ ಕರ್ತವ್ಯಕ್ಕೆ ಬರುವುದನ್ನು ಗ್ರಾಮಸ್ಥರು ವಿರೋಧಿಸಿ ಬಿಇಒ ಕಚೇರಿ ಮುಂದೆ ಧರಣಿ ನಡೆಸಿದ್ದರು. ಶಿಕ್ಷಕ ಪುನಃ ಕರ್ತವ್ಯಕ್ಕೆ ಬರುವುದನ್ನು ವಿರೋಧಿಸಿ 23 ವಿದ್ಯಾರ್ಥಿಗಳನ್ನುಪೋಷಕರು ಶಾಲೆಗೆ ಕಳುಹಿಸದೆ ಗ್ರಾಮದ ಮನೆಯೊಂದರಲ್ಲಿ ಪೋಷಕರೇ ಪಾಠ ಮಾಡಿ ಬಿಸಿಯೂಟ ನೀಡುತ್ತಿದ್ದರು. ಸಮಸ್ಯೆ ಉಲ್ಬಣಿಸುವ ಬೆಳವಣಿಗೆ ಗಮನಿಸಿ ಬಿಇಒ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಪೋಷಕರು, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್‌ ಶೆಟ್ಟಿ ಬಣದ ಕಾರ್ಯಕರ್ತರು ಹಾಗೂ ಶಿಕ್ಷಕರೊಂದಿಗೆ ಮಾತುಕತೆ ನಡೆಸಿ ಎಲ್ಲಾ ಮಕ್ಕಳು ಶಾಲೆಗೆ ಬರುವಂತೆ ಮನವೊಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT