ಹಳೇಬೀಡು: ಅಡಗೂರು ಗ್ರಾಮ ಪಂಚಾಯಿತಿ ಕಚೇರಿಯ ಬಾಗಲಿನ ಬಳಿ ಮಣ್ಣಿನಡಿಯಲ್ಲಿ ಬುಧವಾರ ಪೂಜೆ ಮಾಡಿದ ತೆಂಗಿನ ದೊರಕಿದೆ. ವಾಮಚಾರ ಮಾಡಿ ಕಾಯಿಯನ್ನು ಹೂತಿರಬಹುದು ಎಂದು ಶಂಕೆ ವ್ಯಕ್ತವಾಗಿದೆ.
ಮಣ್ಣಿನಡಿ ಹೂತಿದ್ದ ತೆಂಗಿನಕಾಯಿಗೆ ಕೆಂಪು ಹಾಗೂ ಕಪ್ಪು ಬಣ್ಣದ ದಾರ ಸುತ್ತಿ, ಕುಂಕುಮ ಹಚ್ಚಲಾಗಿದೆ. ತೆಂಗಿನಕಾಯಿ ಮೊಳಕೆ ಒಡೆದು ಚಿಗುರುತ್ತಿತ್ತು. ನೌಕರರು ಸಸಿಗೆ ಪ್ರತಿದಿನ ನೀರು ಹಾಕುತ್ತಿದ್ದರು. ಚಿಗುರು ತೆಂಗಿನ ಗರಿಯಂತೆ ಕಾಣುತ್ತಿದೆ ಎಂದು ಸ್ಥಳೀಯರು ಅಂದಾಜಿಸಿ ಕುತೂಹಲದಿಂದ ಮಣ್ಣಿನಿಂದ ತೆಗೆದಾಗ ಪೂಜೆ ಮಾಡಿ, ದಾರ ಸುತ್ತಿದ ತೆಂಗಿನಕಾಯಿ ದೊರಕಿದೆ.
ಮೌಢ್ಯದಿಂದ ಕಚೇರಿ ಬಳಿ ವಿಶೇಷವಾಗಿ ಪೂಜಿಸಿ ತೆಂಗಿನ ಕಾಯಿ ಹೂತಿರಬಹುದು. ಮೌಢ್ಯದತ್ತ ಜನರು ಗಮನಹರಿಸಬೇಡಿ. ನೌಕರರು ಹಾಗೂ ಗ್ರಾಮಸ್ಥರು ಭಯಪಡಬಾರದು ಎಂದು ಪಿಡಿಒ ಕೃಷ್ಣಪ್ಪ ಪೂಜಾರ್ ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.