ADVERTISEMENT

ಸಹಪಾಠಿಗಳ ನಿಂದನೆ ಸಹಿಸದೆ ವಿದ್ಯಾರ್ಥಿ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2021, 12:08 IST
Last Updated 23 ಮಾರ್ಚ್ 2021, 12:08 IST

ಹಾಸನ: ಸಹಪಾಠಿಗಳ ನಿಂದನೆ ಸಹಿಸದೆ ಮನನೊಂದು ತಾಲ್ಲೂಕಿನ ಹರುವನಹಳ್ಳಿಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ
ಹರ್ಷಿತ್ ಗೌಡ (16) ಸೋಮವಾರ ಸಂಜೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ನಗರದ ಹೊರವಲಯದ ಕಂಚಮಾರನಹಳ್ಳಿ ಸಮೀಪದ ಖಾಸಗಿ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ಓದುತ್ತಿದ್ದ ಹರ್ಷಿತ್‌
ಊರಿಗೆ ತೆರಳಿದ್ದ. ದನ ಮೇಯಿಸಲು ಹೋಗುವುದಾಗಿ ಹೇಳಿ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ.

ವರ್ಷದ ಹಿಂದೆ ನಡೆದಿದ್ದ ಅಪಘಾತದಲ್ಲಿ ಈತನ ಮೂಗಿಗೆ ಪೆಟ್ಟು ಬಿದ್ದಿತ್ತು. ಸ್ನೇಹಿತರೆಲ್ಲ ಮೂಗು ಹರುಕ ಎಂದು
ರೇಗಿಸುತ್ತಿದ್ದರು. ಇದೇ ವಿಚಾರವಾಗಿ ಮಾರ್ಚ್‌ 19ರಂದು ಶಾಲೆಯಲ್ಲಿ ಗಲಾಟೆ ನಡೆದಿತ್ತು. ಶಿಕ್ಷಕರು
ವಿದ್ಯಾರ್ಥಿಗಳಿಗೆ ಬುದ್ಧಿ ಮಾತು ಹೇಳಿದ್ದರು. ಇದರಿಂದ ಬೇಸರಗೊಂಡು ಹಾಸ್ಟೆಲ್‌ನಿಂದ ಹರ್ಷಿತ್‌ ಮನೆಗೆ
ಬಂದಿದ್ದ ಎಂದು ಮೃತ ಬಾಲಕನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.