ADVERTISEMENT

ಬೆಂಕಿ ಆಕಸ್ಮಿಕ: ಬೆಳೆ ಭಸ್ಮ

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 8:22 IST
Last Updated 15 ಡಿಸೆಂಬರ್ 2012, 8:22 IST

ಹಿರೇಕೆರೂರ: ತಾಲ್ಲೂಕಿನ ಕುಡುಪಲಿ ಗ್ರಾಮದಲ್ಲಿ ಈಚೆಗೆ ಬೆಂಕಿ ಆಕಸ್ಮಿಕದಿಂದ ಕೊಯ್ಲಿಗೆ ಬಂದಿದ್ದ ಸುಮಾರು 15 ಎಕರೆ ಗೋವಿನಜೋಳದ ಹೊಲ ಸುಟ್ಟುಹೋಗಿ ಅಪಾರ ಹಾನಿ ಸಂಭವಿಸಿದೆ.

ಬೆಂಕಿಯನ್ನು ನಂದಿಸಲು ಹಿರೇಕೆರೂರ ಅಗ್ನಿಶಾಮಕ ದಳದವರು ಆಗಮಿಸಿದರೂ ಹೊಲಗಳಿಗೆ ಹೋಗುವುದಕ್ಕೆ ದಾರಿ ಇಲ್ಲದೇ ಅಸಹಾಯಕರಾದರು ಅಷ್ಟರಲ್ಲಿ ಸಂಪೂರ್ಣ ಬೆಳೆ ಸುಟ್ಟು ಹೋಗಿದೆ ಎಂದು ತಿಳಿದು ಬಂದಿದ್ದು, ರೈತರಾದ ರಾಮನಗೌಡ ಹೊಸಗೌಡ್ರ, ರಾಮಪ್ಪ ಮಾಳಗೇರ ಹಾಗೂ ಮಹೇಶಪ್ಪ ರುದ್ರಪ್ಪನವರ ಎಂಬವರಿಗೆ ಸೇರಿದ ಗೋವಿನ ಜೋಳದ ಬೆಳೆ ಬೆಂಕಿಗೆ ಆಹುತಿಯಾಗಿದೆ.

ಆಕಸ್ಮಿಕ ಬೆಂಕಿಗೆ ಆಹುತಿಯಾದ ಬೆಳೆಗಳಿಗೆ ಸೂಕ್ತ ಪರಿಹಾರ ಕೊಡಬೇಕು ಎಂದು  ಬಸನಗೌಡ ಕರೇಗೌಡ್ರ ಹಾಗೂ ಮರಡೆಪ್ಪ ಚೌಡಕ್ಕನವರ ಒತ್ತಾಯಿ ಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.