ADVERTISEMENT

ವಾಲ್ಮೀಕಿ ಸಭಾ ಭವನ ನಿರ್ಮಾಣಕ್ಕೆ ಅನುದಾನ: ಶಾಸಕರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 6:47 IST
Last Updated 25 ಅಕ್ಟೋಬರ್ 2017, 6:47 IST

ಹಾನಗಲ್‌: ‘ಪಟ್ಟಣದಲ್ಲಿ ವಾಲ್ಮೀಕಿ ಸಭಾ ಭವನ ನಿರ್ಮಾಣಕ್ಕೆ ಸರ್ಕಾರ ದಿಂದ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಒತ್ತಾಯಿಸಿ ಕುರುಬ ಸಮಾಜದ ಮುಖಂಡರು ಮಂಗಳವಾರ ಶಾಸಕ ಮನೋಹರ ತಹಸೀಲ್ದಾರ್‌ ಗೆ ಮನವಿಪತ್ರ ಸಲ್ಲಿಸಿದರು.

‘ಪಟ್ಟಣದ ಕುರುಬಗೇರಿ ಭಾಗದಲ್ಲಿರುವ ಕುರುಬ ಸಮಾಜದ ಆರಾಧ್ಯ ದೈವ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕಾಮ ಗಾರಿ ನಡೆಯುತ್ತಿದ್ದು, ದೇವಸ್ಥಾನಕ್ಕೆ ಹೊಂದಿಕೊಂಡ ಖಾಲಿ ಜಾಗೆಯಲ್ಲಿ ಕುರುಬ ಸಮಾಜದ ಸಾಮಾಜಿಕ, ಧಾರ್ಮಿಕ ಚಟುವಟಿಕೆಗಳಿಗಾಗಿ ಭವನ ನಿರ್ಮಾಣ ಅಗತ್ಯವಾಗಿದೆ.

ಭವನ ನಿರ್ಮಾಣಕ್ಕೆ ಈಗಾಗಲೇ ವಂತಿಗೆ ರೂಪದಲ್ಲಿ ಹಣ ಸಂಗ್ರಹಣೆ ನಡೆ ಯುತ್ತಿದೆ. ಸರ್ಕಾರದ ಸಹಾಯಧನ ಪ್ರಮುಖವಾಗಿದೆ, ಹೀಗಾಗಿ ₹ 25 ಲಕ್ಷ ಅನುದಾನ ಬಿಡುಗಡೆ ಮಾಡಬೇಕು’ ಎಂದು ಮನವಿಯಲ್ಲಿ ಒತ್ತಾಯಿ ಸಲಾಗಿದೆ.

ADVERTISEMENT

‘ಉದ್ದೇಶಿತ ಕನಕ ಭವನ ನಿರ್ಮಾಣದ ಜಾಗೆಯ ದಾಖಲೆ ಪರಿಶೀಲಿಸಿ ಅನುದಾನ ಬಿಡುಗಡೆಯ ಪ್ರಕ್ರಿಯೆ ನಡೆಸಲಾಗುತ್ತದೆ, ಈಗಾಗಲೇ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ಕುರುಬ ಸಮಾಜಕ್ಕೆ ಸಭಾ ಭವನ ನಿರ್ಮಾಣ ಮಾಡಲಾಗಿದೆ, ಪಟ್ಟಣದಲ್ಲಿಯೂ ವ್ಯವಸ್ಥಿತ ಭವನ ನಿರ್ಮಾಣದ ಆಸಕ್ತಿ ಇದೆ’ ಎಂದರು.

ಬೀರಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ದಾನಪ್ಪ ಗಂಟೇರ, ಗೌರವ ಅಧ್ಯಕ್ಷ ಭೋಜರಾಜ ಕರೂದಿ, ಸುರೇಶ ದೊಡ್ಡಕುರುಬರ, ಮಹೇಶ ಪವಾಡಿ, ರಾಮಚಂದ್ರ ಹೊಸಮನಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.