ADVERTISEMENT

ಸ್ವತಂತ್ರ ಧರ್ಮದ ಮಾನ್ಯತೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 9:05 IST
Last Updated 26 ಅಕ್ಟೋಬರ್ 2017, 9:05 IST

ರಾಣೆಬೆನ್ನೂರು: ‘ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಸ್ಥಾನಮಾನ ನೀಡಬೇಕು ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು’ ಎಂದು ಆಗ್ರಹಿಸಿ ಬುಧವಾರ ಬಸವ ಜ್ಯೋತಿ ಬಳಗ, ಅನುಭವ ಮಂಟಪ ಲಿಂಗಾಯತ ಧರ್ಮ ಸಮನ್ವಯ ಸಮಿತಿ ತಾಲ್ಲೂಕು ಘಟಕದ ಪದಾಧಿಕಾರಿಗಳು ತಹಶೀಲ್ದಾರ್‌ ರಾಮಮೂರ್ತಿ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಗುಡ್ಡದ ಆನ್ವೇರಿ ಶಿವಯೋಗಿ ಸ್ವಾಮೀಜಿ, ಹೊಸಮಠದ ಬಸವ ಶಾಂತಲಿಂಗ ಸ್ವಾಮೀಜಿ, ಸುವರ್ಣಮ್ಮ ಪಾಟೀಲ, ಎಸ್‌.ವಿ.ಸಂಗಮದ, ಡಾ.ಸರೋಜಾ ಹೂಲಿಹಳ್ಳಿ, ರಾಜೇಶ್ವರಿ ಪಾಟೀಲ, ವಿಜಯಕುಮಾರ ಪಾಟೀಲ, ಚನ್ನಬಸಪ್ಪ ದಾವಣಗೆರೆ, ಐರಣಿಶೆಟ್ಟರ್, ಪಿ.ಕುಳೇನೂರ, ವೀಣಾ ಹೊದ್ದಿಗ್ಗೇರಿ, ಪಿ.ಕೊತಂಬ್ರಿ, ಅರ್ಜುನ, ಶಾರದಾ, ಶಕುಂತಲಾ ಯಳಮಲಿ ಹಾಗೂ ಪಾರಮ್ಮ ಬೆನಕನಕೊಂಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT