ADVERTISEMENT

ಬಾಲಕನ ತೊಡೆ ಹೊಕ್ಕ ಗಿಡದ ಕೊಂಬೆ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 15:54 IST
Last Updated 7 ನವೆಂಬರ್ 2020, 15:54 IST
ಗಿಡದ ಕೊಂಬೆ ತೊಡೆಗೆ ಹೊಕ್ಕಿ ಗಾಯಗೊಂಡ ಬಾಲಕ ತರುಣ್ ವಿರುಪಾಕ್ಷಪ್ಪ ಪೂಜಾರ
ಗಿಡದ ಕೊಂಬೆ ತೊಡೆಗೆ ಹೊಕ್ಕಿ ಗಾಯಗೊಂಡ ಬಾಲಕ ತರುಣ್ ವಿರುಪಾಕ್ಷಪ್ಪ ಪೂಜಾರ   

ಸವಣೂರ: ತಾಲ್ಲೂಕಿನ ಕಳಸೂರ ಗ್ರಾಮದಲ್ಲಿ ಶುಕ್ರವಾರ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಚಂಡನ್ನು ತರಲು ಕಾಂಪೌಂಡ್‌ನಿಂದ ಜಿಗಿದ ಬಾಲಕ ಆಯತಪ್ಪಿ ಗಿಡದ ಕೊಂಬೆಯ ಮೇಲೆ ಬಿದ್ದ ಪರಿಣಾಮ ಕೊಂಬೆ ಬಾಲಕನ ತೊಡೆಯನ್ನು ಹೊಕ್ಕಿ ಹೊರಬಂದಿದೆ.

ಗ್ರಾಮದ ನಿವಾಸಿ ತರುಣ್‌ ವಿರೂಪಾಕ್ಷಪ್ಪ ಪೂಜಾರ (10) ಗಾಯಗೊಂಡ ಬಾಲಕ. ಬಾಲಕನಿಗೆ ತಕ್ಷಣ ಕಳಸೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ, ತೊಡೆಯಲ್ಲಿ ಸೇರಿಕೊಂಡಿದ್ದ ಕೊಂಬೆಯನ್ನು ಹೊರ ತೆಗೆಯಲಾಗಿದೆ. ನಂತರ, ಹಾವೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ದಾಖಲಿಸಿ, ಶನಿವಾರ ಬೆಳಿಗ್ಗೆ ಹುಬ್ಬಳ್ಳಿ ಕಿಮ್ಸ್‌ಗೆ ಕರೆದೊಯ್ಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT