ರಾಣೆಬೆನ್ನೂರು: ಎಸಿಬಿ ಅಧಿಕಾರಿಗಳು ದಾಳಿ ಮಾಡುವ ಪಟ್ಟಿಯಲ್ಲಿ ಇರುವ ನಗರಸಭೆಯ ಎಂಜಿನಿಯರ್ ಹೆಸರನ್ನು ತೆಗೆಸುತ್ತೇನೆ, ನನಗೆ ಹಣ ನೀಡಿ ಎಂದು ಆಮಿಷವೊಡ್ಡಿದ್ದ ನಕಲಿ ಎಸಿಬಿ ಅಧಿಕಾರಿಯನ್ನು ಪೊಲೀಸರು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಬೆಂಗಳೂರಿನ ವೆಂಕಟಸ್ವಾಮಿ ಬಡಾವಣೆಯ ಹಲಸೂರಿನ ನಿವಾಸಿ ಜಾನ್ ಮ್ಯಾಥೀವ್ ಬಂಧಿತ. ಈತ ರಾಣೆಬೆನ್ನೂರಿನ ನಗರಸಭೆಯ ಪೌರಾಯುಕ್ತ ಉದಯಕುಮಾರ ತಳವಾರ ಅವರನ್ನು ಭೇಟಿ ಮಾಡಿ, ತಾನು ಎಸಿಬಿ ಅಧಿಕಾರಿ ಎಂದು ಪರಿಚಯ ಮಾಡಿಕೊಂಡಿದ್ದ.
ನಿಮ್ಮ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಂಜಿನಿಯರ್ ಮಹೇಶ ಗುಡಿಸಲುಮನಿ ಅವರ ಹೆಸರು ಎಸಿಬಿ ದಾಳಿಯ ಪಟ್ಟಿಯಲ್ಲಿದೆ. ಹಣ ನೀಡಿದರೆ ಮೇಲಧಿಕಾರಿಗಳಿಗೆ ಹೇಳಿ ಹೆಸರನ್ನು ಪಟ್ಟಿಯಿಂದ ತೆಗೆಸುತ್ತೇನೆ ಎಂದು ಆಮಿಷ ಒಡ್ಡಿದ್ದ.
ಈ ಬಗ್ಗೆ ರಾಣೆಬೆನ್ನೂರಿನ ಶಹರ ಪೊಲೀಸ್ ಠಾಣೆಗೆ ಪೌರಾಯುಕ್ತ ಉದಯಕುಮಾರ್ ದೂರು ನೀಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.