ADVERTISEMENT

ಸ್ವಚ್ಛತಾ ಸಿಬ್ಬಂದಿಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2020, 12:39 IST
Last Updated 3 ನವೆಂಬರ್ 2020, 12:39 IST
ಹಾವೇರಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ಸ್ವಚ್ಛತೆ ನಿರ್ವಹಣೆ ಹಾಗೂ ಕೈತೋಟ ಹಸಿರೀಕರಣಕ್ಕೆ ಶ್ರಮಿಸಿದ ಸ್ವಚ್ಛತಾ ಕೆಲಸಗಾರ್ತಿ ನಾಗಮ್ಮ ಮಾಳಗಿ ಅವರನ್ನು ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್ ರಂಗನಾಥ್ ಸನ್ಮಾನಿಸಿದರು
ಹಾವೇರಿಯ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ಸ್ವಚ್ಛತೆ ನಿರ್ವಹಣೆ ಹಾಗೂ ಕೈತೋಟ ಹಸಿರೀಕರಣಕ್ಕೆ ಶ್ರಮಿಸಿದ ಸ್ವಚ್ಛತಾ ಕೆಲಸಗಾರ್ತಿ ನಾಗಮ್ಮ ಮಾಳಗಿ ಅವರನ್ನು ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್ ರಂಗನಾಥ್ ಸನ್ಮಾನಿಸಿದರು   

ಹಾವೇರಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕಚೇರಿಯ ಸ್ವಚ್ಛತೆ ನಿರ್ವಹಣೆ ಹಾಗೂ ಕೈತೋಟ ಹಸಿರೀಕರಣಕ್ಕೆ ಶ್ರಮಿಸಿದ ಕಚೇರಿಯ ಸ್ವಚ್ಛತಾ ಕೆಲಸಗಾರ್ತಿ ನಾಗಮ್ಮ ಮಾಳಗಿ ಅವರನ್ನು ಮಂಗಳವಾರ ಕಚೇರಿಯಲ್ಲಿ ಜಿಲ್ಲಾ ವಾರ್ತಾಧಿಕಾರಿ ಡಾ.ಬಿ.ಆರ್ ರಂಗನಾಥ್ ಸನ್ಮಾನಿಸಿದರು.

ಸರ್ಕಾರಿ ಕಚೇರಿಗಳಲ್ಲಿ ಸ್ವಚ್ಛತೆ ಹಾಗೂ ಹಸರೀಕರಣ ನಿರ್ವಹಣೆ ಉತ್ತೇಜಿಸಲು ಜಿಲ್ಲಾಡಳಿತದಿಂದ ಇದೇ ಮೊದಲ ಬಾರಿಗೆ ಜಿಲ್ಲಾಮಟ್ಟದ ‘ಜಿಲ್ಲಾ ಸ್ವಚ್ಛತಾ ಗಾಂಧಿ ಪುರಸ್ಕಾರ 2020’ರ ಪ್ರಥಮ ಸ್ಥಾನ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ನೀಡಲಾಗಿತ್ತು. ಸನ್ಮಾನ ಸಮಾರಂಭದಲ್ಲಿ ಕಚೇರಿ ಸಿಬ್ಬಂದಿ ಭಾರತಿ ಎಚ್, ಎಚ್.ಎಂ. ನಾಯಕ, ರಾಮವ್ವ ಕೊರವರ, ಅಪ್ರೆಂಟಿಸ್ ಚಂದ್ರು ಶಿಡೇನೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT