ADVERTISEMENT

ಕೃಷ್ಣ ವೇಷಧಾರಿಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 14:40 IST
Last Updated 11 ಆಗಸ್ಟ್ 2020, 14:40 IST
ಹಾವೇರಿ ನಗರದ ಗ್ರಾಮೀಣ ಪೊಲೀಸ್‌ ಠಾಣೆ ಬಡಾವಣೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿ ಕೃಷ್ಣ ವೇಷಧಾರಿಗಳ ಪ್ರದರ್ಶನ ನಡೆಯಿತು
ಹಾವೇರಿ ನಗರದ ಗ್ರಾಮೀಣ ಪೊಲೀಸ್‌ ಠಾಣೆ ಬಡಾವಣೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿ ಕೃಷ್ಣ ವೇಷಧಾರಿಗಳ ಪ್ರದರ್ಶನ ನಡೆಯಿತು   

ಹಾವೇರಿ:ಇಲ್ಲಿಯ ಹಾನಗಲ್‌ ರಸ್ತೆಯಲ್ಲಿರುವ ಗ್ರಾಮೀಣ ಪೊಲೀಸ್‌ ಠಾಣೆಯ ಬಡಾವಣೆಯಲ್ಲಿ ಜೀವನ ಜ್ಯೋತಿ ನಗರ ಮತ್ತು ಗ್ರಾಮೀಣ ಸಂಸ್ಥೆ ವತಿಯಿಂದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಪುಟಾಣಿ ಕೃಷ್ಣ ವೇಷಧಾರಿಗಳ ಪ್ರದರ್ಶನ ನಡೆಯಿತು.

ವಸತಿ ಗೃಹದ ವಿವಿಧ ನೌಕರರ ಮಕ್ಕಳಾದ ಭಗತ್ ಮು. ಚಿಂದಿ, ಮನೋಜ ನಾ ಗೌರಮ್ಮನವರ, ಸ್ನೇಹಾ ಉ ತಳವಾರ, ಭಾರ್ಗವ ಮು ಚಿಂದಿ, ಹರ್ಷಿತಾ ಗು. ಉಮ್ಮಚಗಿ, ಲೋಕೇಶ ಉ. ತಳವಾರ, ಆದರ್ಶ ಗು. ಉಮ್ಮಚಗಿ, ಕಾರ್ತೀಕ ಸಾರಂಗಮಠ ಹಾಗೂ ತರೂಣ ಹೊಂಬಾಳ ಪುಟಾಣಿ ಕೃಷ್ಣರಾಗಿ ವೇದಿಕೆಯಲ್ಲಿ ಮಿಂಚಿದರು.

ಸುಮತಿ ಚಿಂದಿ , ಸುಮಿತ್ರಾ ಮಲ್ಲಾಪೂರ, ರಮೇಶ ಗೂಡೂರ, ಉಮೇಶ ತಳವಾರ ಹಾಗೂ ಲಕ್ಷ್ಮಿ ಹೊಂಬಾಳೆ ಅತಿಥಿಗಳಾಗಿ ಆಗಮಿಸಿದ್ದರು. ಜೀವನ ಜ್ಯೋತಿ ಸಂಸ್ಥೆಯ ಕಾರ್ಯದರ್ಶಿ ರಾಜೇಶ್ವರಿ ರವಿ ಸಾರಂಗಮಠ ಅಧ್ಯಕ್ಷತೆ ವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.