ರಟ್ಟೀಹಳ್ಳಿ: ತಾಲ್ಲೂಕು ಕೇಂದ್ರದಲ್ಲಿ ಪ್ರಾರಂಭಗೊಂಡ ಪಿ.ಎಲ್.ಡಿ. ಬ್ಯಾಂಕ್ ಹಾಗೂ ಟಿ.ಎ.ಪಿ.ಸಿ.ಎಂ.ಎಸ್. ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕೃಷಿ ಸಚಿವ ಬಿ.ಸಿ.ಪಾಟೀಲ ಅವರ ನೇತೃತ್ವದಲ್ಲಿ ಶುಕ್ರವಾರ ನಡೆಯಿತು.
ಪಿ.ಎಲ್.ಡಿ. ಬ್ಯಾಂಕಿನ ಅಧ್ಯಕ್ಷರಾಗಿ ಮಕರಿ ಗ್ರಾಮದ ಮಾಲತೇಶಗೌಡ ಗಂಗೋಳ, ಉಪಾಧ್ಯಕ್ಷರಾಗಿ ಅಣಜಿ ಗ್ರಾಮದ ರೇಣುಕಪ್ಪ ಭರಮಗೌಡ್ರ, ಟಿಎಪಿಸಿಎಂಎಸ್ ಅಧ್ಯಕ್ಷರಾಗಿ ರಟ್ಟೀಹಳ್ಳಿಯ ಪ್ರಶಾಂತ ದ್ಯಾವಕ್ಕಳವರ, ಉಪಾಧ್ಯಕ್ಷರಾಗಿ ಕೋಡಮಗ್ಗಿ ಗ್ರಾಮದ ಕರೇಗೌಡ ಯಡಗೋಡಿ ಅವರನ್ನು ಆಯ್ಕೆ ಮಾಡಲಾಯಿತು.
ಸಚಿವ ಬಿ.ಸಿ.ಪಾಟೀಲ ಮಾತನಾಡಿ, ‘ರೈತರಿಗೆ ಸರಿಯಾದ ಸಮಯಕ್ಕೆ ಬಿತ್ತನೆ ಬೀಜ, ಗೊಬ್ಬರ ಪೂರೈಸುವುದರಲ್ಲಿ ಸಹಕಾರ ಸಂಘಗಳ ಪಾತ್ರ ಪ್ರಮುಖವಾಗಿದೆ. ತಾಲ್ಲೂಕಿನ ಎಲ್ಲ ಸಹಕಾರ ಸಂಘಗಳು ಗೊಬ್ಬರ ಮಾರಾಟ ಪರವಾನಗಿ ಪಡೆದು, ಸಕಾಲಕ್ಕೆ ಗೊಬ್ಬರ, ಔಷಧ ಪೂರೈಸಬೇಕು’ ಎಂದು ಹೇಳಿದರು.
ಎಸ್.ಎಸ್. ಪಾಟೀಲ, ದೊಡ್ಡಗೌಡ ಪಾಟೀಲ, ರವಿಶಂಕರ ಬಾಳಿಕಾಯಿ, ಆರ್.ಎನ್. ಗಂಗೋಳ, ಜಿ.ಪಿ. ಪ್ರಕಾಶಗೌಡ, ಹಾಲಪ್ಪ ಮುದಿಗೌಡ್ರ, ಗಣೇಶ ವೇರ್ಣೇಕರ, ಶಂಭಣ್ಣ ಗೂಳಪ್ಪನವರ, ವೀರನಗೌಡ ಮಕರಿ, ಶಂಕರ ಚನ್ನಗೌಡ್ರ, ರವೀಂದ್ರ ಹರವಿಶೆಟ್ಟರ, ವಿಜಯ ಅಂಗಡಿ, ಬಸವರಾಜ ಬಾಗೋಡಿ, ರಾಮಣ್ಣ ಜಾಧವ, ಈರಪ್ಪ ಕಟ್ಟೀಮನಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.