ADVERTISEMENT

ಗುತ್ತಲ: ವರದಾ ನದಿಗೆ ಹಾರಿ ಯುವಕ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 2:26 IST
Last Updated 29 ಜುಲೈ 2025, 2:26 IST
, ಶರಣಪ್ಪ ಹನುಮಪ್ಪ ಆರೇರ(28)
, ಶರಣಪ್ಪ ಹನುಮಪ್ಪ ಆರೇರ(28)   

ಗುತ್ತಲ: ಸಮೀಪದ ಹಾಲಾಗಿ ಗ್ರಾಮದಲ್ಲಿ ಯುವಕನೊಬ್ಬ ಸೋಮವಾರ ವರದಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೊಪ್ಪಳ ಜಿಲ್ಲಾ ಕಿನ್ನಾಳ ಗ್ರಾಮದ ಶರಣಪ್ಪ ಹನಮಪ್ಪ ಆರೇರ(28) ಮೃತರು.

ಒಂದು ವರ್ಷದಿಂದ ಹಾಲಗಿ ಗ್ರಾಮದ ಸಂಬಂಧಿಕರ ಮನೆಯ ಪಕ್ಕದಲ್ಲಿ ತಗಡಿನ ಶೇಡ್‌ನಲ್ಲಿ ತಾಯಿ ಜೊತೆ ವಾಸಿಸುತ್ತಿದ್ದರು.

ADVERTISEMENT

‘₹5 ಲಕ್ಷ ಸಾಲ ಮಾಡಿಕೊಂಡಿದ್ದರು. ಸಾಲ ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರಬಹುದು. ವರದಾ ನದಿಗೆ ಭಾರಿ ಪ್ರಮಾಣದ ನೀರು ಇರುವುದರಿಂದ ಶವ ಪತ್ತೆ ಮಾಡುವುದು ಕಷ್ಟ’ ಎಂದು ಪೊಲೀಸರು ತಿಳಿಸಿದ್ದಾರೆ. ಗುತ್ತಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.