ADVERTISEMENT

ವೀರೇಶ ಅಜೂರ ಬಿಜೆಪಿಗೆ ಸೇರ್ಪಡೆ

ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಂತಸ

​ಪ್ರಜಾವಾಣಿ ವಾರ್ತೆ
Published 24 ಜೂನ್ 2021, 17:09 IST
Last Updated 24 ಜೂನ್ 2021, 17:09 IST
ಶಿಗ್ಗಾವಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ವೀರೇಶ ಆಜೂರ ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು
ಶಿಗ್ಗಾವಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ವೀರೇಶ ಆಜೂರ ಗುರುವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು   

ಶಿಗ್ಗಾವಿ: ‘ಮನೆ ಮಗ ಮನೆಗೆ ಮರಳಿದ್ದಾನೆ. ವೀರೇಶ ಅಜೂರ ನಮ್ಮ ಪಕ್ಷದವರೇ, ಬಿಜೆಪಿ ಅವಕಾಶವನ್ನು ನೀಡದಿದ್ದಕ್ಕೆ ಕಾಂಗ್ರೆಸ್ ಸೇರಿದ್ದರು. ಈಗ ಮರಳಿ ಬಿಜೆಪಿಗೆ ಬಂದಿದ್ದಾರೆ, ನಮ್ಮವರೇ ನಮ್ಮ ಮನೆಗೆ ಮರಳಿ ಬಂದಿರುವದು ಸಂತಸ ತಂದಿದೆ’ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದರು.

ಪಟ್ಟಣದ ಅವರ ನಿವಾಸದಲ್ಲಿ ಗುರುವಾರ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡ ಕಾಂಗ್ರೆಸ್ ಮುಖಂಡ ವಿರೇಶ ಆಜೂರ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.

ಆಜೂರ ಅವರು ಕ್ರೀಯಾಶೀಲರು, ನಾಡು, ಸಮುದಾಯಗಳ ಬಗ್ಗೆ ಅಭಿಮಾನ ಹೊಂದಿದ ವ್ಯಕ್ತಿ, ಯಾವುದೇ ಪಕ್ಷದಲ್ಲಿದ್ದರು ಒಳ್ಳೆಯ ಒಡನಾಟ ಹೊಂದಿದ್ದಾರೆ. ನನ್ನ ಹತ್ತಿರ ಬಂದು ಮಾತನಾಡಿದಾಗ ಸಂತೋಷದ ಜೊತೆ ಆಶ್ಚರ್ಯವೂ ಆಯಿತು, ಅವರು ಬಿಜೆಪಿಯ ಕಾರ್ಯಗಳನ್ನು ಮತ್ತು ಜನಬೆಂಬಲ ಹಾಗೂ ಬಿಜೆಪಿಯಲ್ಲಿ ನೆಮ್ಮದಿಯ ಕೆಲಸ ನೋಡಿ ಬಂದಿರುವದಾಗಿ ತಿಳಿಸಿದ್ದಾರೆ ಎಂದು ತಿಳಿಸಿದರು.

ADVERTISEMENT

‘ಅವರು ಒಪ್ಪಂದವಿಲ್ಲದೆ ಪಕ್ಷಕ್ಕೆ ಬಂದಿರುವುದು ಸಂತಸ ತಂದಿದೆ’ ಎಂದರು.

ಮುಖಂಡ ವಿರೇಶ ಅಜೂರ ಮಾತನಾಡಿ, ‘ಪಕ್ಷ ಸಂಘಟನೆಯ ಜೊತೆಗೆ ಜನ ಸೇವೆಗೆ ಬಸವರಾಜ ಬೊಮ್ಮಾಯಿ ಅವರ ಜೊತೆ ಕೈ ಜೊಡಿಸುತ್ತೇನೆ. ಅಭಿಮಾನದೊಂದಿಗೆ ಅವರ ಜೊತೆಯಲ್ಲಿ ಕಾರ್ಯನಿರ್ವಹಿಸುತ್ತೆನೆ ಎಂದರು.

ಬಿಜೆಪಿ ತಾಲ್ಲೂಕು ಅಧ್ಯಕ್ಷ ಶಿವಾನಂದ ಮ್ಯಾಗೇರಿ, ಪುರಸಭೆ ಅಧ್ಯಕ್ಷ ಶ್ರೀಕಾಂತ ಬುಳ್ಳಕ್ಕನವರ, ಉಪಾಧ್ಯಕ್ಷ ಮಂಜುನಾಥ ಬ್ಯಾಹಟ್ಟಿ, ಯುವ ಮೋಚಾ ರಾಜ್ಯ ಸದಸ್ಯ ನರಹರಿ ಕಟ್ಟಿ, ಮುಖಂಡರಾದ ಉಮೇಶ ಅಂಗಡಿ, ಶಿವರಾಜ ರಾಯಣ್ಣವರ, ದೇವಣ್ಣ ಚಾಕಲಬ್ಬಿ, ಶಿವಪ್ರಸಾದ ಸುರಗಿಮಠ, ರೇಣುಕಗೌಡ ಪಾಟೀಲ, ಎಸ್.ಕೆ.ಅಕ್ಕಿ ‌, ಮುಖಂಡರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.