ADVERTISEMENT

ಅಫಜಲಪುರ | ಸಿಡಿಲು ಬಡಿದು ಸಾವು: ಕಲಾವತಿ ಕುಟುಂಬಕ್ಕೆ ₹5 ಲಕ್ಷ ಪರಿಹಾರ

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2023, 16:29 IST
Last Updated 3 ಸೆಪ್ಟೆಂಬರ್ 2023, 16:29 IST
ಸಿದ್ದನೂರು ಗ್ರಾಮದ ಕಲಾವತಿ ಚಿಕ್ಕ ರೇವೂರು ಅವರ ಕುಟುಂಬದವರಿಗೆ ಶಾಸಕ ಎಂ. ವೈ. ಪಾಟೀಲ್ ಅವರು ಭಾನುವಾರ ಪರಿಹಾರದ ಚೆಕ್‌ ನೀಡಿದರು
ಸಿದ್ದನೂರು ಗ್ರಾಮದ ಕಲಾವತಿ ಚಿಕ್ಕ ರೇವೂರು ಅವರ ಕುಟುಂಬದವರಿಗೆ ಶಾಸಕ ಎಂ. ವೈ. ಪಾಟೀಲ್ ಅವರು ಭಾನುವಾರ ಪರಿಹಾರದ ಚೆಕ್‌ ನೀಡಿದರು   

ಅಫಜಲಪುರ: ಶನಿವಾರ ಸಂಜೆ ಸಿಡಿಲು ಬಡಿದು ಮೃತಪಟ್ಟ ತಾಲ್ಲೂಕಿನ ಸಿದ್ದನೂರು ಗ್ರಾಮದ ಕಲಾವತಿ ಚಿಕ್ಕರೇವೂರು ಅವರ ಕುಟುಂಬಕ್ಕೆ ಶಾಸಕ ಎಂ. ವೈ. ಪಾಟೀಲ್ ಅವರು ಭಾನುವಾರ ಸಾಂತ್ವನ ಹೇಳಿ ಸರ್ಕಾರದಿಂದ ₹ 5 ಲಕ್ಷ ಪರಿಹಾರದ ಚೆಕ್‌ ನೀಡಿದರು.

ಇದೇ ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ಕವಿತಾ ಅವರ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸಲಿದ್ದು, ಅವರಿಗೆ ಸಹಾಯ ಮಾಡಿ ಎಂದು ಶಾಸಕರು ತಹಶೀಲ್ದಾರ್‌ ಸಂಜು ಕುಮಾರ್ ದಾಸರ ಅವರಿಗೆ ಸೂಚಿಸಿದರು. ಕಲಾವತಿ ಅವರ ಕುಟುಂಬದವರಿಗೆ ಆಹಾರ ಇಲಾಖೆಯಿಂದ ಸ್ವಲ್ಪ ದಿನದವರೆಗೆ ಆಹಾರಧಾನ್ಯ ನೀಡುವಂತೆ ತಹಶೀಲ್ದಾರ್‌ಗೆ ಶಾಸಕರು ಸೂಚಿಸಿದರು.

ರೇವೂರು( ಬಿ) ಠಾಣೆಯ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಎಸ್. ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸಿದ್ಧಾರ್ಥ ಬಸರಿಗಿಡದ, ಪ್ರಕಾಶ್ ಜಮಾದಾರ, ವಕೀಲ ಎಸ್. ಎಸ್. ಪಾಟೀಲ್ ಹಾಗೂ ಗ್ರಾಮದ ಮುಖಂಡರಾದ ಸಿದ್ದಣ್ಣ ಸಗರ್, ಮಲ್ಕಣ್ಣ ಶಿರ್, ದತ್ತು ಹೆರೂರ, ಗುಂಡಯ್ಯ ಹಿರೇಮಠ , ಲತೀಫ್ ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.