ADVERTISEMENT

ಕಮಲಾಪುರ: ಬೊಲೆರೊ ಮಗುಚಿ ವ್ಯಕ್ತಿ ಸಾವು 

​ಪ್ರಜಾವಾಣಿ ವಾರ್ತೆ
Published 29 ನವೆಂಬರ್ 2020, 1:27 IST
Last Updated 29 ನವೆಂಬರ್ 2020, 1:27 IST
ಕಮಲಾಪುರ ಸಮೀಪದ ರಾಯಲ್ ಡಾಬಾ ಬಳಿ ಶನಿವಾರ ಬೆಳಗಿನ ಜಾವ ಬೊಲೆರೊ ವಾಹನ ಮಗುಚಿರುವುದು
ಕಮಲಾಪುರ ಸಮೀಪದ ರಾಯಲ್ ಡಾಬಾ ಬಳಿ ಶನಿವಾರ ಬೆಳಗಿನ ಜಾವ ಬೊಲೆರೊ ವಾಹನ ಮಗುಚಿರುವುದು   

ಕಮಲಾಪುರ: ಇಲ್ಲಿನ ರಾಯಲ್ ಡಾಬಾ ಎದುರುಶನಿವಾರ ಬೆಳಗಿನ ಜಾವ ಬೊಲೆರೊ ವಾಹನ ಮಗುಚಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ.

ಕಲಬುರ್ಗಿಯ ಬಿದ್ದಾಪುರ ಕಾಲೊನಿ ನಿವಾಸಿ ಸಾಗರ ಅಶೋಕ ಗುತ್ತೇದಾರ (32) ಮೃತಪಟ್ಟವರು.

‌ಬೀದರ್‌ನಿಂದ ಕಲಬುರ್ಗಿ ಬರುತ್ತಿದ್ದಾಗ ರಸ್ತೆ ಬದಿಯ ಮರಕ್ಕೆ ವಾಹನ ಅಪ್ಪಳಿಸಿದೆ. ವಾಹನದಲ್ಲಿ ಇದ್ದ ಕುಶಾಲ ರಾಜೇಂದ್ರ ಚಿಂಚೋಳಿಕರ್, ರಾಜು ಗುರುನಾಥ ಸೊನ್ನದ್ ಹಾಗೂ ಶಿವಕುಮಾರ ಮಾಹಾಂತಯ್ಯ ಗುತ್ತೇದಾರ ಅವರಿಗೆ ಗಂಭೀರ ಗಾಯಗಳಾಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಿಎಸ್‍ಐ ಪರಶುರಾಮ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.