ಚಿಂಚೋಳಿ: ಸಹಾಯಕ ಕೃಷಿ ನಿರ್ದೆಶಕ ವೀರಶೆಟ್ಟಿ ರಾಠೋಡ್ ಮುಂಗಾರಿನ ಬೆಳೆಗಳಲ್ಲಿ ಎಡೆ ಹೊಡೆಯುವ ಮೂಲಕ ತಮ್ಮ ಕೃಷಿ ಪ್ರೇಮ ಮೆರೆದರು.
ತಾಲ್ಲೂಕಿನ ಚತ್ರಸಾಲ ಗ್ರಾಮಕ್ಕೆ ಬೆಳೆ ಪರಿಶೀಲನೆಗೆ ಗುರುವಾರ ತೆರಳಿದಾಗ ರೈತ ಮಹಿಳೆಯೊಬ್ಬರು ಸೈಕಲ್ ಎಡೆ ಹೊಡೆಯುತ್ತಿರುವುದು ನೋಡಿದ ವೀರಶೆಟ್ಟಿ ರಾಠೋಡ್ ಜೀಪಿನಿಂದ ಇಳಿದು, ನಿವೃತ್ತ ಕೃಷಿ ಅಧಿಕಾರಿ ನಾಸರ್ ಮತ್ತು ಚಾಲಕನೊಂದಿಗೆ ಹೊಲಕ್ಕೆ ತೆರಳಿ ಬೆಳೆಯ ಮಾಹಿತಿ ಪಡೆದರು. ನಂತರ ರೈತ ಮಹಿಳೆಯಿಂದ ಸೈಕಲ್ ಎಡೆ ಪಡೆದುಕೊಂಡು ತಾವೇ ಒಂದಿಷ್ಟು ಎಡೆ ಹೊಡೆದು ಗಮನ ಸೆಳೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.