ADVERTISEMENT

ಗುವಿವಿಯಲ್ಲಿ ಅಂಬೇಡ್ಕರ್ ಜಯಂತ್ಯುತ್ಸವ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2022, 5:00 IST
Last Updated 15 ಏಪ್ರಿಲ್ 2022, 5:00 IST
ಗುಲಬರ್ಗಾ ವಿ.ವಿ.ಯಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂಪತ್ ಕುಮಾರ ಲೋಯಾ, ಪ್ರೊ. ಚಂದ್ರಕಾಂತ ಯಾತನೂರ, ಜಿ. ಕುಮಾರ ನಾಯ್ಕ, ಪ್ರೊ. ದಯಾನಂದ ಅಗಸರ, ಪ್ರೊ. ಎನ್. ಬಿ. ನಡುವಿನಮನಿ, ಪ್ರೊ. ಮೇಧಾವಿನಿ ಕಟ್ಟಿ, ಶರಣಬಸಪ್ಪ ಕೋಟೆಪ್ಪಗೋಳ, ಪ್ರೊ. ನಿಂಗಣ್ಣ ಕಣ್ಣೂರ ಇದ್ದರು
ಗುಲಬರ್ಗಾ ವಿ.ವಿ.ಯಲ್ಲಿ ಆಯೋಜಿಸಿದ್ದ ಡಾ.ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಸಂಪತ್ ಕುಮಾರ ಲೋಯಾ, ಪ್ರೊ. ಚಂದ್ರಕಾಂತ ಯಾತನೂರ, ಜಿ. ಕುಮಾರ ನಾಯ್ಕ, ಪ್ರೊ. ದಯಾನಂದ ಅಗಸರ, ಪ್ರೊ. ಎನ್. ಬಿ. ನಡುವಿನಮನಿ, ಪ್ರೊ. ಮೇಧಾವಿನಿ ಕಟ್ಟಿ, ಶರಣಬಸಪ್ಪ ಕೋಟೆಪ್ಪಗೋಳ, ಪ್ರೊ. ನಿಂಗಣ್ಣ ಕಣ್ಣೂರ ಇದ್ದರು   

ಕಲಬುರಗಿ: ಇಲ್ಲಿನ ಗುಲಬರ್ಗಾ ವಿಶ್ವವಿದ್ಯಾಲಯದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಗುರುವಾರ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜಿ. ಕುಮಾರ ನಾಯ್ಕ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಸಂವಿಧಾನ ಕರಡು ರಚನಾ ಸಮಿತಿಯಲ್ಲಿ ಹಲವು ಸದಸ್ಯರಿದ್ದರೂ ಅಂಬೇಡ್ಕರ್ ಅವರಿಗೆ ಹೆಚ್ಚಿನ ಜವಾಬ್ದಾರಿ ಇತ್ತು. ಹೀಗಾಗಿಯೇ ಇತಿಹಾಸದಲ್ಲಿ ಅವರಿಗೆ ವಿಶೇಷ ಸ್ಥಾನವಿದೆ. ಅವರು ರಚಿಸಿದ ಸಂವಿಧಾನವನ್ನು ಅಳವಡಿಸಿಕೊಂಡು ನಾವೆಲ್ಲ ಭಾರತೀಯರು ಎಂಬ ಸಮಾನತೆಯ ಪ್ರಜ್ಞೆ ಬೆಳೆಯಬೇಕು’ ಎಂದರು.

ಕುಲಪತಿ ಪ್ರೊ. ದಯಾನಂದ ಅಗಸರ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ADVERTISEMENT

ಕುಲಸಚಿವ ಶರಣಬಸಪ್ಪ ಕೋಟೆಪ್ಪಗೋಳ, ಸಿಂಡಿಕೇಟ್ ಸದಸ್ಯ ಡಾ. ಸಂಪತ್ ಕುಮಾರ್ ಲೋಯಾ, ಅಕಾಡೆಮಿಕ್ ಕೌನ್ಸಲ್ ಸದಸ್ಯ ಡಾ. ನಿಂಗಣ್ಣ ಕಣ್ಣೂರ, ಡಾ.ಬಿ.ಆರ್. ಅಂಬೇಡ್ಕರ್ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ. ಚಂದ್ರಕಾಂತ ಯಾತನೂರ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.