
ಸೇಡಂ: ‘ಸೇಡಂನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದಿಂದ ಕೊಡಮಾಡುವ ರಾಜ್ಯಮಟ್ಟದ ಪ್ರತಿಷ್ಠಿತ ಅಮ್ಮ ಪ್ರಶಸ್ತಿಗೆ 11 ಕೃತಿಗಳ-ಲೇಖಕರು ಆಯ್ಕೆಯಾಗಿದ್ದಾರೆ’ ಎಂದು ಅಮ್ಮ ಪ್ರಶಸ್ತಿ ಸಂಚಾಲಕಿ ರತ್ನಕಲಾ ಮಹಿಪಾಲರೆಡ್ಡಿ ಮುನ್ನೂರ್ ತಿಳಿಸಿದ್ದಾರೆ.
ಕಾವ್ಯ ವಿಭಾಗದಲ್ಲಿ ಗೀತಾ ವಸಂತ (ಪ್ರಾಣಪಕ್ಷಿಯ ರೆಕ್ಕೆ) ಹಾಗೂ ಸದಾಶಿವ ಸೊರಟೂರು (ದೇವರನ್ನು ಹೊರ ಹಾಕುತ್ತೇನೆ), ಕಥಾ ವಿಭಾಗದಲ್ಲಿ ವಿಜಯಶ್ರೀ ಹಾಲಾಡಿ (ಉಮ್ಮಲ್ತಿ ಗುಡಿಯ ಸಾಕ್ಷಿ) ಹಾಗೂ ಆನಂದ ಕುಂಚನೂರು (ನಿರೂಪ), ಕಾದಂಬರಿ ವಿಭಾಗದಲ್ಲಿ ಸುನಂದಾ ಕಡಮೆ (ಹೈವೇ 63) ಹಾಗೂ ಮುದಿರಾಜ ಬಾಣದ (ಸಿಕ್ಕು), ಸಂಕೀರ್ಣ ವಿಭಾಗದಲ್ಲಿ ಬಿ.ಸುರೇಶ (ಅಡುಗೆ ಮನೆಯಲ್ಲೊಂದು ಹುಲಿ) ಹಾಗೂ ಚಂದ್ರಶೇಖರ ಮದಭಾವಿ (ಮುರಿದ ಕಡಲು), ಪ್ರಬಂಧ ವಿಭಾಗದಲ್ಲಿ ಡಾ.ಬಸವರಾಜ ಸಾದರ (ಮೂವತ್ತು ಕ್ರಾಂತಿಕಾರಿ ವಚನಗಳು) ಹಾಗೂ ಸದಾನಂದ ಪಾಟೀಲ (ಕೊರೋನಾದ ಕಣ್ಣೀರಿನ ಕಥೆಗಳು), ಹಾಗೂ ಇದೇ ವರ್ಷದಿಂದ ಮಕ್ಕಳ ವಿಭಾಗದಲ್ಲಿ `ಬಹುರೂಪಿ’ ಪ್ರಾಯೋಜಿತ ಅರುಣಾ ನರೇಂದ್ರ (ಕಮಲಿಯ ಕುರಿಮರಿ) ಕೃತಿಗಳನ್ನು 25ನೇ ವರ್ಷದ `ಅಮ್ಮ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿಯು ತಲಾ ₹5 ಸಾವಿರ ನಗದು ಪುರಸ್ಕಾರ, ನೆನಪಿನ ಕಾಣಿಕೆ, ಪ್ರಮಾಣ ಪತ್ರ, ಸತ್ಕಾರ ಮತ್ತು ಈ ನೆಲದ ಸಿರಿಧಾನ್ಯ ತೊಗರಿ ಬೇಳೆ ಒಳಗೊಂಡಿರುತ್ತದೆ. ಎಲ್ಲ ವಿಭಾಗದಲ್ಲಿ ಲೇಖಕರು ಪ್ರಶಸ್ತಿಯನ್ನು ಹಂಚಿಕೊಂಡಿದ್ದು, ಇದೇ ವರ್ಷದಿಂದ ಆರಂಭಿಸಿರುವ ಬೆಂಗಳೂರಿನ ಬಹುರೂಪಿ ಪ್ರಾಯೋಜಿತ ಮಕ್ಕಳ ವಿಭಾಗದಲ್ಲಿ ಎರಡೂವರೆ ಸಾವಿರ ನಗದು, ಪುಸ್ತಕ ಬಹುಮಾನವನ್ನು ಸಹ ಇದೇ ನ.25 ರಂದು ಸಂಜೆ 5:30ಕ್ಕೆ ಸೇಡಂನ ಶ್ರೀ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ `ಅಮ್ಮ ಪ್ರಶಸ್ತಿ’ ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.