ಕಲಬುರಗಿ: ನಗರದ ಶಿಲ್ಪ ಕಲಾವಿದೆ ಗಾಯತ್ರಿ ಎ. ಶಿಲ್ಪಿ ಅವರ ಏಕವ್ಯಕ್ತಿ ಶಿಲ್ಪಕಲಾ ಪ್ರದರ್ಶನ ಇದೇ 16ರಿಂದ 18ರವರೆಗೆ ಇಲ್ಲಿನ ಓಂ ನಗರದ ಎಂ.ಬಿ. ಲೋಹಾರ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಧನಸಹಾಯದಿಂದ ನಡೆಯುವ ಈ ಪ್ರದರ್ಶನದ ಉದ್ಘಾಟನೆ ಇದೇ 16ರಂದು ಸಂಜೆ 4.30ಕ್ಕೆ ನೆರವೇರಲಿದೆ. ಸಾನ್ನಿಧ್ಯವನ್ನು ಏಕದಂಡಿ ಮಠದ ಸುರೇಂದ್ರ ಸ್ವಾಮೀಜಿ ವಹಿಸುವರು. ಉದ್ಘಾಟನೆಯನ್ನು ಜಿಲ್ಲಾ ಕಸಾಪ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ನೆರವೇರಿಸುವರು. ಅತಿಥಿಗಳಾಗಿ ಹಿರಿಯ ಶಿಲ್ಪ ಕಲಾವಿದ ಚಂದ್ರಶೇಖರ ಶಿಲ್ಪಿ, ಎಂ.ಎ. ಟೆಂಗಳಿಕರ್ ಕಲಾ ಮತ್ತು ವಾಣಿಜ್ಯ ಕಾಲೇಜಿನ ಅಧ್ಯಕ್ಷರಾದ ಚಿತ್ರಲೇಖ ಎ. ಟೆಂಗಳಿಕರ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಸದಸ್ಯ ನಟರಾಜ ಎಂ. ಶಿಲ್ಪಿ ಭಾಗವಹಿಸುವರು. ಅಧ್ಯಕ್ಷತೆಯನ್ನು ಎಂ.ಬಿ. ಲೋಹಾರ ಆರ್ಟ್ ಗ್ಯಾಲರಿಯ ಸಾಯಿನಾಥ ಲೋಹಾರ ವಹಿಸುವರು.
16ರಿಂದ 18ರವರೆಗೆ ನಿತ್ಯ ಬೆಳಿಗ್ಗೆ 11ರಿಂದ ಸಂಜೆ 5.30ರವರೆಗೆ ವೀಕ್ಷಿಸಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.