ADVERTISEMENT

ಅಫಜಲಪುರ | ಭೀಮಾ ತೀರದಲ್ಲಿ ಪರ್ವಕಾಲ ಸ್ನಾನ

ಸಂಕ್ರಾಂತಿ ದೇವಲ ಗಾಣಗಾಪುರದಲ್ಲಿ ಭಕ್ತರಿಂದ ಪುಣ್ಯಸ್ನಾನ

​ಪ್ರಜಾವಾಣಿ ವಾರ್ತೆ
Published 15 ಜನವರಿ 2026, 6:20 IST
Last Updated 15 ಜನವರಿ 2026, 6:20 IST
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಭೀಮಾ ನದಿಯಲ್ಲಿ ಸಂಕ್ರಾಂತಿಯ ನಿಮಿತ್ತ ಯಾತ್ರಿಕರು ಹಾಗೂ ಅರ್ಚಕ ಭಕ್ತಾದಿಗಳು ಪರ್ವಕಾಲ ಸ್ನಾನ ಮಾಡಿದರು
ಅಫಜಲಪುರ ತಾಲ್ಲೂಕಿನ ದೇವಲ ಗಾಣಗಾಪುರ ಭೀಮಾ ನದಿಯಲ್ಲಿ ಸಂಕ್ರಾಂತಿಯ ನಿಮಿತ್ತ ಯಾತ್ರಿಕರು ಹಾಗೂ ಅರ್ಚಕ ಭಕ್ತಾದಿಗಳು ಪರ್ವಕಾಲ ಸ್ನಾನ ಮಾಡಿದರು   

ಅಫಜಲಪುರ: ತಾಲ್ಲೂಕಿನ ದೇವಲ ಗಾಣಗಾಪುರದಲ್ಲಿ ಸಂಕ್ರಾಂತಿ ಹಿನ್ನೆಲೆ ಬುಧವಾರ ಸಹಸ್ರಾರು ಯಾತ್ರಿಕರು ಹಾಗೂ  ಭಕ್ತಾದಿಗಳು ಭೀಮಾ ನದಿಯ ರುದ್ರಪಾದ ತೀರ್ಥ ತೀರದಲ್ಲಿ ಪರ್ವಕಾಲ ಸ್ನಾನ ಮಾಡಿದರು.

ನಿರ್ಗುಣ ಮಠದ ಕಾರ್ಯದರ್ಶಿ ಪ್ರಿಯಾಂಕ ಪೂಜಾರಿ ಮಾತನಾಡಿ, ‘ನದಿಗಳಲ್ಲಿ ಪರ್ವಕಾಲದಲ್ಲಿ ಸ್ನಾನ ಮಾಡುವುದರಿಂದ ದೇಹ ಮತ್ತು ಮನಸ್ಸು ಶುದ್ಧವಾಗುತ್ತದೆ’ ಎಂದರು.

ಯಾತ್ರಿಕರು ಪುಣ್ಯ ಸ್ನಾನ ನಂತರ ದತ್ತಾತ್ರೇಯ ಮಹಾರಾಜರ ದರ್ಶನ ಪಡೆದರು. ತಾಲ್ಲೂಕಿನ ಘತ್ತರಗಿ ಭಾಗ್ಯವಂತಿ ದೇವಸ್ಥಾನದ ಬದಿಯಲ್ಲಿ ಹರಿಯುವ ಭೀಮಾ ನದಿಯಲ್ಲಿ ಭಕ್ತಾದಿಗಳು ಸಂಕ್ರಮಣದೊಂದು ಪುಣ್ಯಸ್ನಾನ ಮಾಡಿ ದೇವಿಯ ದರ್ಶನ ಪಡೆದರು. ಪ್ರಖ್ಯಾತ್ ಪೂಜಾರಿ, ನರಹರಿ ಪೂಜಾರಿ, ಪ್ರದುಮ್ನ ಪೂಜಾರಿ, ಅವಧೂತ ಪೂಜಾರಿ, ಸರ್ವೇಶ್ ಪೂಜಾರಿ, ಗುಂಡು ಪೂಜಾರಿ, ಕಿರಣ್ ಪೂಜಾರಿ, ಪ್ರತೀಕ್ ಪೂಜಾರಿ ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.