ADVERTISEMENT

ಚಿಂಚೋಳಿ: 22 ಜನರಿಂದ ರಕ್ತದಾನ

​ಪ್ರಜಾವಾಣಿ ವಾರ್ತೆ
Published 26 ಮೇ 2022, 3:01 IST
Last Updated 26 ಮೇ 2022, 3:01 IST
ಚಿಂಚೋಳಿಯಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ರಕ್ತದಾನಿ ಸೋಮಶೇಖರ ಹುಲಿ ಅವರಿಗೆ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೌತಮ‌ಪಾಟೀಲ ಪ್ರಮಾಣ ಪತ್ರ ವಿತರಿಸಿದರು
ಚಿಂಚೋಳಿಯಲ್ಲಿ ಬಸವ ಜಯಂತಿ ಪ್ರಯುಕ್ತ ಹಮ್ಮಿಕೊಂಡ ರಕ್ತದಾನ ಶಿಬಿರದಲ್ಲಿ ರಕ್ತದಾನಿ ಸೋಮಶೇಖರ ಹುಲಿ ಅವರಿಗೆ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಗೌತಮ‌ಪಾಟೀಲ ಪ್ರಮಾಣ ಪತ್ರ ವಿತರಿಸಿದರು   

ಚಿಂಚೋಳಿ: ಬಸವ ಜಯಂತಿ ಅಂಗವಾಗಿ ಜಯಂತ್ಯೋತ್ಸವ ಸಮಿತಿ‌ವತಿಯಿಂದ ಇಲ್ಲಿನ‌ ಕೇತಕಿ‌ ಸಂಗಮೇಶ್ವರ ಆಸ್ಪತ್ರೆಯಲ್ಲಿ ಆಯೋಜಿಸಿದ ರಕ್ತದಾನ ಶಿಬಿರದಲ್ಲಿ‌ 22 ಯುವಕರು ರಕ್ತದಾನ‌
ಮಾಡಿದ್ದಾರೆ ಎಂದು ಸಮಿತಿ ಕಾರ್ಯಾಧ್ಯಕ್ಷ ಶರಣು ಪಾಟೀಲ‌ ಮೋತಕಪಳ್ಳಿ
ತಿಳಿಸಿದ್ದಾರೆ.

ರಕ್ತದಾನ ಶಿಬಿರವನ್ನು ತಾಲ್ಲೂಕು ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ ಡಾ. ಸಂತೋಷ ಪಾಟೀಲ‌ ಉದ್ಘಾಟಿಸಿದರು. ಟಿಎಚ್ಒ ಡಾ. ಮಹಮದ್ ಗಫಾರ, ಕೇತಕಿ ಸಂಗಮೇಶ್ವರ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಬಸವೇಶ ವೈಜನಾಥ ಪಾಟೀಲ, ಸಮಿತಿ ಅಧ್ಯಕ್ಷ ಗೌತಮ ಪಾಟೀಲ, ನಾಗರಾಜ‌ ಮಲಕೂಡ, ನೀಲಕಂಠ ಸೀಳಿನ್, ಶರಣು ಪಾಟೀಲ ಮೋತಕಪಳ್ಳಿ ಇದ್ದರು. ಜಿಮ್ಸ್‌ ರಕ್ತ ನಿಧಿ ಕೇಂದ್ರದ ಅಧಿಕಾರಿಗಳು ರಕ್ತ ಪಡೆದುಕೊಂಡರು.‌

ಕಾರ್ಯಕ್ರಮದಲ್ಲಿ ಸುತ್ತಲಿನ ಗ್ರಾಮಗಳ ಯುವಕರು, ಬಸವ ಜಯಂತ್ಯೂತ್ಸವ ಸಮಿತಿ ಪದಾಧಿಕಾರಿಗಳು ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.