ADVERTISEMENT

ಮಾನವೀಯ ತುಡಿತದಿಂದ ಸೇವೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 17:08 IST
Last Updated 6 ಜೂನ್ 2020, 17:08 IST
ಯಶೋದಾ
ಯಶೋದಾ   

ಕೊರೊನಾ ವೈರಾಣು ಉಪಟಳ ಆರಂಭವಾದಾಗಿಂದ ಎಲ್ಲ ಪೊಲೀಸರೂ ಉಸಿರು ಬಿಗಿ ಹಿಡಿದು ಕೆಲಸ ಮಾಡುತ್ತಿದ್ದಾರೆ. ಅವರಲ್ಲಿ ನಾನೂ ಒಬ್ಬಳು. ಪ್ರತಿ ದಿನ ಕೆಲಸಕ್ಕೆ ಹೋಗುವ ಮುನ್ನವೇ ಇಂದಿನ ಜವಾಬ್ದಾರಿ ಏನು? ಅದರಾಚೆಗೂ ನಾನು ಹೆಚ್ಚಿಗೆ ಏನು ಮಾಡಲು ಸಾಧ್ಯವಿದೆ ಎಂದು ಲೆಕ್ಕ ಹಾಕಿಕೊಂಡು ಹೋಗುತ್ತೇನೆ. ವಿವಿಧ ಕ್ವಾರಂಟೈನ್‌ ಕೇಂದ್ರಗಳಲ್ಲಿ ನಿಯೋಜಿಸಿದ ಪೊಲೀಸ್‌ ಸಿಬ್ಬಂದಿಯ ಕೆಲಸ ಪರಿಶೀಲನೆ, ಜನರ ಮನವೊಲಿಸುವುದು, ಪಾಸಿಟಿವ್ ಪ್ರಕರಣ ಕಂಡುಬಂದಲ್ಲಿ ಸೂಕ್ತ ವ್ಯವಸ್ಥೆ ಮಾಡುವುದು ದೈನಂದಿನ ಕೆಲಸಗಳು.

ಇದರಾಚೆಗೂ ನನ್ನೊಳಗಿನ ಮಾನವೀಯ ತುಡಿತ ನಿಲ್ಲುವುದಿಲ್ಲ. ಇಂಥ ಸಂದರ್ಭದಲ್ಲಿ ಪ್ರತಿಯೊಬ್ಬರೂ ಹೆಚ್ಚಿಗೆ ಶ್ರಮ ಹಾಕಿದರೆ ಆದಷ್ಟು ಬೇಗ ಕೊರೊನಾ ಹೊರಗಟ್ಟಲು ಸಾಧ್ಯ. ಬರವಣಿಗೆ ಹಾಗೂ ಗಾಯನ ಅಭ್ಯಾಸವೂ ನನಗಿದೆ. ಆ ಕ್ಷೇತ್ರದಲ್ಲಿನ ಸಾಧನೆಗೆ ಬಂದ ಸಾವಿರಾರು ರೂಪಾಯಿಗಳನ್ನು ಹಾಗೇ ಇಟ್ಟಿದ್ದೆ. ಅದೇ ಹಣದಿಂದ ದಿನಸಿಗಳನ್ನು ಕಳೆದ ಎರಡೂವರೆ ತಿಂಗಳಿಂದ ವಿತರಿಸುತ್ತಿದ್ದೇನೆ. ಇದು ನನಗೆ ಖುಷಿ ಕೊಡುತ್ತಿದೆ. ಅನಾಥಾಶ್ರಮ, ವೃದ್ಧಾಶ್ರಮ, ಬಾಲ ಮಂದಿರಗಳಲ್ಲಿ ಸೇವೆ ನೀಡುವುದು ಎಂದಿನ ಖಯಾಲಿ. ಕೊರೊನಾದಲ್ಲೂ ಅದನ್ನು ಮುಂದುವರಿಸಿದ್ದೇನೆ. ಪ್ರತಿ ದಿನ ನನ್ನ ಅಡುಗೆ, ಉಡುಗೆ ಜವಾಬ್ದಾರಿ ನನ್ನದೇ. ಮನೆಯಲ್ಲೂ ಸುರಕ್ಷಿತ ಅಂತರ ಅನಿವಾರ್ಯವಾಗಿದೆ.

–ಯಶೋದಾ ಕಟಕೆ, ಎಎಸ್‌ಐ, ಸೈಬರ್‌ ಕ್ರೈಂ ವಿಭಾಗ, ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.