ಕಲಬುರ್ಗಿ: ನಗರದಲ್ಲಿ ಈಚೆಗೆ ಮಿಲ್ಲತ್ ನಗರದ ಜಿಶಾನ್ ಉಸ್ಮಾನ್ (25) ಎಂಬ ಯುವಕನಿಗೆ ಚಾಕು ಇರಿದು ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಗುರುವಾರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ನಗರದ ಯದುಲ್ಲಾ ಕಾಲೊನಿಯ ಕಮಾಲೆ ಮುಜರತ್ ದರ್ಗಾ ಹತ್ತಿರದ ನಿವಾಸಿಗಳಾದ ನದೀಮ್ಪಾಸಾ ಮನ್ನಾಶೇಖ್ (26), ನಯೀಮ್ ಮನ್ನಾಶೇಖ್ (25) ಹಾಗೂ ರಹೀಮ್ ಮನ್ನಾಶೇಖರ್ (22) ಬಂಧಿತರು.
ಈ ಮೂವರೂ ಸೇರಿಕೊಂಡು ಮಾರ್ಚ್ 20ರ ರಾತ್ರಿ 9ರ ಸುಮಾರಿಗೆ ಜಿಶಾನ್ ಮೇಲೆ ಚಾಕುವಿನಿಂದ ದಾಳಿ ಮಾಡಿದ್ದರು. ತಲೆ, ಕುತ್ತಿಗೆಗೆ ಹೊಡೆದು ನಂತರ ಬೆನ್ನಿನಲ್ಲಿ ಡ್ರ್ಯಾಗರ್ ತೂರಿಸಿದ್ದರು. ಜಿಶಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈ ಕೊಲೆ ವೈಯಕ್ತಿಕ ಕಾರಣಗಳಿಂದಾಗಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.