ADVERTISEMENT

ಯಡ್ರಾಮಿ: 70 ಎಕರೆ ಶೇಂಗಾ ಬೆಳೆ ಹಾನಿ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2020, 15:20 IST
Last Updated 19 ಅಕ್ಟೋಬರ್ 2020, 15:20 IST
ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದ ಶೇಂಗಾ ಬೆಳೆ ಮಳೆಗೆ ಹಾಳಾಗಿರುವುದನ್ನು ರೈತ ಮಹಿಳೆ ತೋರಿಸಿದರು
ಯಡ್ರಾಮಿ ತಾಲ್ಲೂಕಿನ ಕಡಕೋಳ ಗ್ರಾಮದ ಶೇಂಗಾ ಬೆಳೆ ಮಳೆಗೆ ಹಾಳಾಗಿರುವುದನ್ನು ರೈತ ಮಹಿಳೆ ತೋರಿಸಿದರು   

ಯಡ್ರಾಮಿ: ತಾಲ್ಲೂಕಿನಲ್ಲಿ ಈ ಬಾರಿ 70 ಎಕರೆ ಶೇಂಗಾ ಬಿತ್ತನೆ ಮಾಡಿದ್ದು, ಎಲ್ಲವೂ ಮಳೆಗೆ ನೀರು ಪಾಲಾಗಿ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕಡಕೋಳ ಗ್ರಾಮದಲ್ಲಿ ತೊಗರಿ, ಹತ್ತಿ, ಶೇಂಗಾ ಮತ್ತು ಕುಂಬಳಕಾಯಿ ಹಾನಿಯಾಗಿದೆ.

ಶೇಂಗಾ ಗಿಡಗಳು ಹೆಚ್ಚಿನ ತೇವಾಂಶದಿಂದ ಸಂಪೂರ್ಣ ನೆಲ ಕಚ್ಚಿವೆ. ಆರಂಭದಲ್ಲಿ ಹದ ಮಳೆಯಾಗಿದ್ದರಿಂದ ರೈತರು ಕೊರೊನಾ ವೈರಸ್ ಲೆಕ್ಕಿಸದೆ ಜೀವ ಪಣಕಿಟ್ಟು ಹೊಲವನ್ನು ಉಳುಮೆ ಮಾಡಿ ಬಿತ್ತಿದ್ದರು.

ಶೇಂಗಾ ಗಿಡಗಳು ಇದೀಗ ಮಳೆ ಸುರಿತ್ತಿರುವುದರಿಂದ ಕೆಂಪಾಗಿ ಹಾಳಾಗುತ್ತಿವೆ. ಇನ್ನು ಕುಂಬಳಕಾಯಿ ಬೆಳೆದ ಮಾಡಿದ ರೈತರ ಗೋಳು ಹೇಳತೀರದಾಗಿದೆ. ಬೆಳೆ ಬೆಳೆಯಲು ಮಾಡಿದ ಶ್ರಮ, ಖರ್ಚು ಹಣ ನೀರಿನಲ್ಲಿ ಮಾಡಿದ ಹೋಮದಂತಾಗಿದೆ.

ADVERTISEMENT

ಸಂಬಂಧಿಸಿದ ಅಧಿಕಾರಿಗಳು ಬೆಳೆ ಹಾನಿಗೀಡಾದ ಗ್ರಾಮಗಳಿಗೆ ಭೇಟಿ ನೀಡದೆ ಇರುವುದಿಂದ ಹಾಗೂ ಬೆಳೆ ಹಾನಿ ಸಮೀಕ್ಷೆ ನಿಧಾನಗತಿಯಲ್ಲಿ ಸಾರುವುದರಿಂದ ಬೆಳೆ ಪರಿಹಾರ ಸಿಗುತ್ತೋ ಇಲ್ಲವೋ ಎಂಬ ಆತಂಕವನ್ನು ರೈತರಲ್ಲಿ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.