ADVERTISEMENT

ರಾಮಮಂದಿರ ನಿರ್ಮಾಣಕ್ಕೆ ₹ 1.11 ಲಕ್ಷ ದೇಣಿಗೆ

​ಪ್ರಜಾವಾಣಿ ವಾರ್ತೆ
Published 22 ಜನವರಿ 2021, 1:00 IST
Last Updated 22 ಜನವರಿ 2021, 1:00 IST
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಶ್ರೀ ಸಾಯಿ ಬಾಬಾ ಟ್ರಸ್ಟ್ ಪದಾಧಿಕಾರಿಗಳು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರಿಗೆ ದೇಣಿಗೆಯ ಚೆಕ್ ವಿತರಿಸಿದರು. ಲಿಂಗರಾಜಪ್ಪ ಅಪ್ಪ ಇತರರು ಇದ್ದರು
ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ಶ್ರೀ ಸಾಯಿ ಬಾಬಾ ಟ್ರಸ್ಟ್ ಪದಾಧಿಕಾರಿಗಳು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರಿಗೆ ದೇಣಿಗೆಯ ಚೆಕ್ ವಿತರಿಸಿದರು. ಲಿಂಗರಾಜಪ್ಪ ಅಪ್ಪ ಇತರರು ಇದ್ದರು   

ಕಲಬುರ್ಗಿ: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮಮಂದಿರಕ್ಕೆ ಇಲ್ಲಿನ ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್‌ ₹ 1,11,111 ದೇಣಿಗೆ ನೀಡಿದೆ.

ಟ್ರಸ್ಟ್ ಕಾರ್ಯದರ್ಶಿ ವಿ.ಜಿ.ಗಚ್ಚಿನಮನಿ ಅವರು ಚೆಕ್ಕನ್ನು ವಿಧಾನಪರಿಷತ್ ಸದಸ್ಯ ಬಿ.ಜಿ. ಪಾಟೀಲ ಅವರಿಗೆ ಹಸ್ತಾಂತರಿಸಿದರು.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ಬಿಜೆಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ವಿಶ್ವ ಹಿಂದು ಪರಿಷತ್‌ಗಳು ನಿಧಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದ್ದು, ಅದರ ಅಂಗವಾಗಿ ಟ್ರಸ್ಟ್ ಪದಾಧಿಕಾರಿಗಳಿಗೆ ಮನವಿ ಮಾಡಿಕೊಂಡಾಗ ಗುರುವಾರ ಸಂಜೆ ದೇಣಿಗೆಯ ಚೆಕ್ ನೀಡಿದರು.

ADVERTISEMENT

ಇದೇ ಸಂದರ್ಭದಲ್ಲಿ ಬಿ.ಜಿ. ಪಾಟೀಲ, ವಿಶ್ವ ಹಿಂದು ಪರಿಷತ್ ಜಿಲ್ಲಾ ಗೌರವ ಅಧ್ಯಕ್ಷ ಲಿಂಗರಾಜಪ್ಪ ಅಪ್ಪ, ಮಾಣಿಕರಾವ್ ಗಚ್ಚಿನಮನಿ, ರಾಮಚಂದ್ರ ರೆಡ್ಡಿ, ಡಾ.ಬಸವರಾಜ ಬೆಂಡಿ, ಸುಭಾಷ ಕಮಲಾಪುರ, ರಮೇಶ ಜಿ. ಆಪನೂರ, ಕೃಷ್ಣ ಜೋಶಿ, ಡಾ.ಶಿವಶರಣ ಗೊಡಾಳ, ರಮೇಶ ಪಾಟೀಲ, ಡಾ. ಪ್ರಶಾಂತ ಕಮಲಾಪುರಕರ, ಸೂರಜ್‌ ಪ್ರಸಾದ್ ತಿವಾರಿ, ಟ್ರಸ್ಟ್ ಪ್ರಧಾನ ವ್ಯವಸ್ಥಾಪಕ ಸುರೇಶ ನಿಂಬರ್ಗಿ, ರಾಜು ಕುಲಕರ್ಣಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.