ಕಲಬುರಗಿ: ಸಾಲದ ಹೊರೆ ತಾಳಲಾಗದೆ ಚಿಂಚೊಳಿ ತಾಲ್ಲೂಕಿನ ಇರಗಪಳ್ಳಿ ಗ್ರಾಮದ ರೈತ ಚಂದ್ರಪ್ಪ ತಿಪ್ಪಣ್ಣ (49) ವಿಷಕುಡಿದು ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರಿಗೆ ಪತ್ನಿ ಮತ್ತು ಮೂವರು ಪುತ್ರರು ಇದ್ದಾರೆ. ಸುಲೇಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಮೀನುಗಳಲ್ಲಿ ಬಿತ್ತಿದ್ದ ತೊಗರಿ, ಉದ್ದು, ಹತ್ತಿ ಮತ್ತು ಹೆಸರು ಬೆಳೆಗಳು ಮಳೆ ನೀರಿನಿಂದ ಹಾನಿಯಾಗಿತ್ತು. ಜತೆಗೆ ಬ್ಯಾಂಕ್ ಸೇರಿ ಖಾಸಗಿಯಾಗಿ ₹7 ಲಕ್ಷಕ್ಕೂ ಅಧಿಕ ಸಾಲ ಮಾಡಿದ್ದರು. ಸಾಲಕ್ಕೆ ಹೆದರಿದ್ದ ಚಂದ್ರಪ್ಪ ಅವರು ಕಿಟನಾಶಕ ಕುಡಿದಿದ್ದಾರೆ. ಚಿಂಚೋಳಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಕಲಬುರಗಿಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.