ADVERTISEMENT

ಆಲೂರ: ರೈತ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 11:44 IST
Last Updated 23 ಜನವರಿ 2022, 11:44 IST
ಬಸಪ್ಪ ನಗನೂರ
ಬಸಪ್ಪ ನಗನೂರ   

ಯಡ್ರಾಮಿ: ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ 2.30ರ ಸುಮಾರು ಬಸಪ್ಪ ಜುಮ್ಮಣ್ಣ ನಗನೂರ (55) ಎಂಬ ರೈತ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಅವರಿಗೆ ಮೂವರು ಪುತ್ರರು ಹಾಗೂ ಪುತ್ರಿ ಇದ್ದಾರೆ. ಗ್ರಾಮದಲ್ಲಿ ಐದೂವರೆ ಹೆಕ್ಟೇರ್ ಜಮೀನು ಹೊಂದಿದ್ದರು.

ರೈತ ಬಸಪ್ಪ ಕೆಜಿಬಿ ಬ್ಯಾಂಕ್‌ನಲ್ಲಿ ₹ 1.5 ಲಕ್ಷ ಹಾಗೂ ₹ 6 ಲಕ್ಷ ಕೈಗಡ ಸಾಲ ಮಾಡಿದ್ದರು. ಬೆಳೆಗೆ ಸರಿಯಾದ ಬೆಲೆ ಸಿಗದ ಕಾರಣ ಸಾಲವನ್ನು ತೀರಿಸಲಾಗದೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ADVERTISEMENT

ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.