ADVERTISEMENT

ಕಲಬುರಗಿ | ‘ದೇಹ ರಚನಾ ವಿಜ್ಞಾನವುಳ್ಳ ಕರುಣ ಹಸಿಗೆ ಕೃತಿ’

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2025, 4:38 IST
Last Updated 21 ಅಕ್ಟೋಬರ್ 2025, 4:38 IST
ಕಲಬುರಗಿಯ ಬಸವ ಸಮಿತಿಯಲ್ಲಿ ಅನುಭಾವ ನೀಡಿದ ಚಿತ್ಕಳಾ ಮಠಪತಿ ಅವರಿಗೆ ವಿಲಾಸವತಿ ಖೂಬಾ ಅವರು ಪುಸ್ತಕ ನೀಡಿ ಗೌರವಿಸಿದರು. ಭಾರತಿ ಹುಲಗೋಳ ಭಾಗವಹಿಸಿದ್ದರು
ಕಲಬುರಗಿಯ ಬಸವ ಸಮಿತಿಯಲ್ಲಿ ಅನುಭಾವ ನೀಡಿದ ಚಿತ್ಕಳಾ ಮಠಪತಿ ಅವರಿಗೆ ವಿಲಾಸವತಿ ಖೂಬಾ ಅವರು ಪುಸ್ತಕ ನೀಡಿ ಗೌರವಿಸಿದರು. ಭಾರತಿ ಹುಲಗೋಳ ಭಾಗವಹಿಸಿದ್ದರು   

ಕಲಬುರಗಿ: ನಗರದ ಬಸವ ಸಮಿತಿಯ ಅನುಭವ ಮಂಟಪದಲ್ಲಿ ಧರ್ಮರಾಜ್ ಅಫಜಲಪುರಕರ್ ಸ್ಮರಣಾರ್ಥ ಜರುಗಿದ ಅರಿವಿನ ಮನೆ ದತ್ತಿ ಕಾರ್ಯಕ್ರಮದಲ್ಲಿ ಚನ್ನಬಸವಣ್ಣನವರು ರಚಿಸಿದ ‘ಕರಣ ಹಸಿಗೆ’ ಕೃತಿಯ ಕುರಿತು ಚಿತ್ಕಳಾ ಮಠಪತಿ ಮಾತನಾಡಿದರು. 

‘ಚನ್ನಬಸವಣ್ಣನವರು ಸ್ವಯಂಭು ಜ್ಞಾನಿಗಳಾಗಿದ್ದರು ಎಂದು ಅಲ್ಲಮಪ್ರಭುದೇವರು ತಮ್ಮ ವಚನದಲ್ಲಿ ಹೇಳಿದ್ದಾರೆ. ಜ್ಞಾನಕ್ಕೆ ಹಿರಿಯರು ಕಿರಿಯರು ಎಂಬುದು ಇರುವುದಿಲ್ಲ. ಚನ್ನಬಸವಣ್ಣ ಬಸವಣ್ಣನವರ ಅಕ್ಕ ನಾಗಮ್ಮನವರ ಮಗನಾಗಿದ್ದಾರೆ. ಚನ್ನಬಸವಣ್ಣನವರು ತಮ್ಮ 24ನೇ ವಯಸ್ಸಿನಲ್ಲಿ ಹಿರಿದಾದ ಜ್ಞಾನವನ್ನು ಹೊಂದಿದ್ದರು. ಸೋಲಾಪುರದ ಸಿದ್ದರಾಮರಿಗೆ ಲಿಂಗದೀಕ್ಷೆಯನ್ನು ನೀಡಿದವರು. ಆಕಳ ಹಾಲಿನಲ್ಲಿ ತುಪ್ಪವಿದೆ. ಆ ಹಾಲಿಗೆ ಸಂಸ್ಕಾರ ನೀಡಿದಾಗ ತುಪ್ಪವಾಗುವಂತೆ, ನಮ್ಮಲ್ಲೇ ಇರುವ ದೇವರನ್ನು ಸಾಕ್ಷಾತ್ಕಾರಗೊಳಿಸಿಕೊಳ್ಳಲು ನಾವು ಸಂಸ್ಕಾರ ಪಡೆದುಕೊಳ್ಳಬೇಕು ಎಂದು ಶರಣರು ವಚನದಲ್ಲಿ ತಿಳಿಸಿದ್ದಾರೆ’ ಎಂದರು.

ಕಲಬುರಗಿ ಬಸವ ಸಮಿತಿಯ ಅಧ್ಯಕ್ಷೆ ವಿಲಾಸವತಿ ಖೂಬಾ, ಉಪಾಧ್ಯಕ್ಷೆ ಜಯಶ್ರೀ ದಂಡೆ, ಕಾರ್ಯದರ್ಶಿ ಆನಂದ ಸಿದ್ಧಾಮಣಿ, ದತ್ತಿ ದಾಸೋಹಿಗಳಾದ ಭಾರತಿ ಹುಲಗೋಳ, ಕೆ.ಎಸ್. ವಾಲಿ, ಶರಣಗೌಡ ಪಾಟೀಲ ಪಾಳಾ, ಬಂಡಪ್ಪ ಕೇಸುರ್, ಉದ್ದಂಡಯ್ಯ ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.