ADVERTISEMENT

ನಾಯಿ ಮರಿಗಳಿಗೆ ಹಾಲುಣಿಸಿದ ಹಂದಿ!

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2019, 20:15 IST
Last Updated 8 ಡಿಸೆಂಬರ್ 2019, 20:15 IST
ಚಿಂಚೋಳಿಯ ಚಂದಾಪುರದಲ್ಲಿ ಹಂದಿಯೊಂದು ನಾಯಿ ಮರಿಗಳಿಗೆ ಭಾನುವಾರ ಹಾಲುಣಿಸಿತು
ಚಿಂಚೋಳಿಯ ಚಂದಾಪುರದಲ್ಲಿ ಹಂದಿಯೊಂದು ನಾಯಿ ಮರಿಗಳಿಗೆ ಭಾನುವಾರ ಹಾಲುಣಿಸಿತು   

ಚಿಂಚೋಳಿ: ಇಲ್ಲಿನ ಪುರಸಭೆ ವ್ಯಾಪ್ತಿಯ ಚಂದಾಪುರದ ಬಸವ ನಗರಕ್ಕೆ ಹೊಂದಿಕೊಂಡ ಹೌಸಿಂಗ್‌ ಬೋರ್ಡ್ ಲೇಔಟ್‌ನಲ್ಲಿರುವ ಸಂಸದ ಉಮೇಶ ಜಾಧವ ಮನೆಯ ಪಕ್ಕದಲ್ಲಿ ಹಂದಿಯೊಂದು ಎರಡು ನಾಯಿ ಮರಿಗಳಿಗೆ ಭಾನುವಾರ ಹಾಲುಣಿಸಿದೆ.

ಚುಮು ಚುಮು ಚಳಿಯಲ್ಲಿ ಬಿಸಿಲಿನಿಂದ ದೇಹ ಕಾಯಿಸಿಕೊಳ್ಳಲು ಬಯಲಿಗೆ ನಿಂತಿದ್ದ ಹಂದಿ ಬಳಿಗೆ ತೆರಳಿದ ಎರಡು ನಾಯಿ ಮರಿಗಳು ಹಾಲು ಕುಡಿದವು. ಎರಡೂ ಮರಿಗಳು ಒಂದರ ನಂತರ ಒಂದಂತೆ ಹಾಲು ಕುಡಿದು ಹೊಟ್ಟೆ ತುಂಬಿಸಿಕೊಂಡವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT