ಚಿಂಚೋಳಿ: ತಾಲ್ಲೂಕಿನ ಗಡಿಕೇಶ್ವಾರ ಗ್ರಾಮದಲ್ಲಿ ಶನಿವಾರ ಎರಡು ಬಾರಿ ಲಘು ಕಂಪನ ಸಂಭವಿಸಿದೆ.
‘ನಸುಕಿನ 5.12ಕ್ಕೆ ಮತ್ತು ಸಂಜೆ 6.20ಕ್ಕೆ ಲಘು ಕಂಪನ ಸಂಭವಿಸಿದೆ. ನಸುಕಿನಲ್ಲಿ ಭೂಮಿಯಿಂದ ಸದ್ದು ಕೇಳಿ ಬಂದರೆ, ಸಂಜೆಗೆ ಭೂಮಿ ಅದುರಿದ ಅನುಭವವಾಗಿದೆ’ ಎಂದು ಗ್ರಾಮದ ಸಂತೋಷ ಬಳಿ ತಿಳಿಸಿದರು.
‘ಗ್ರಾಮದಲ್ಲಿ ಒಂದು ವಾರದಿಂದ ಭೂಮಿಯಿಂದ ಯಾವುದೇ ರೀತಿಯ ಸದ್ದು ಕೇಳಿ ಬಂದಿರಲಿಲ್ಲ’ ಎಂದು ಗ್ರಾಮದ ಗುಂಡಯ್ಯ ಸ್ವಾಮಿ ಮಠಪತಿ ತಿಳಿಸಿದರು. ಮತ್ತೆ ಸದ್ದು ಬಂದಿದ್ದು, ಜನರಲ್ಲಿ ಭೀತಿಗೆ ಕಾರಣವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.