ADVERTISEMENT

ಕೋವಿಡ್‌: ಛಾಯಾಗ್ರಾಹಕ ಬಾಬುರಾವ್‌ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 7 ಮೇ 2021, 4:40 IST
Last Updated 7 ಮೇ 2021, 4:40 IST
ಬಾಬುರಾವ್‌
ಬಾಬುರಾವ್‌   

ಕಲಬುರ್ಗಿ: ಪತ್ರಿಕಾ ಛಾಯಾಗ್ರಾಹಕ, ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಬಾಬುರಾವ್‌ ಸ್ವಾಮಿ ಅಂತೂರಮಠ (83) ಗುರುವಾರ ನಸುಕಿನ ಜಾವ ಕೋವಿಡ್‌ನಿಂದ ನಿಧನರಾದರು.

‌ಎರಡು ದಿನಗಳ ಹಿಂದೆ ಅವರಿಗೆ ಸೋಂಕು ಕಾಣಿಸಿಕೊಂಡಿತ್ತು. ಜಿಮ್ಸ್‌ನಲ್ಲಿ ಆಮ್ಲಜನಕದ ಬೆಡ್‌ ಸಿಗದ ಕಾರಣ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು.

ಛಾಯಾಗ್ರಾಹಕ ರಾಜುಸ್ವಾಮಿ ಅಂತೂರಮಠ ಸೇರಿ ಇಬ್ಬರು ಪುತ್ರರು, ಪುತ್ರಿ ಹಾಗೂ ಪತ್ನಿ ಇದ್ದಾರೆ. ಅವರಿಗೆ 2017ರಲ್ಲಿ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಹ ನೀಡಲಾಗಿತ್ತು. ಹಲವು ಸಂಘಟನೆಗಳ ಗೌರವ ಹಾಗೂ ಜಿಲ್ಲಾಮಟ್ಟದ ಪ್ರಶಸ್ತಿಗಳೂ ಅವರಿಗೆ ಸಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT