ಶಹಾಬಾದ್: ‘ಧರ್ಮ ಕಾರ್ಯಗಳಿಂದ ಬದುಕಿನಲ್ಲಿ ಶಾಂತಿ ಕಂಡುಕೊಳ್ಳಲು ಸಾಧ್ಯ’ ಎಂದು ಬೆಳಗಾವಿ ನಿರಂಜನ ಸ್ವಾಮಿಗಳು ಹೇಳಿದರು.
ನಗರದ ಅಖಿಲ ಭಾರತ ವೀರಶೈವ ಮಹಾಸಭಾ ಹಾಗೂ ವೀರಶೈವ ಮಹಿಳಾ ಘಟಕದ ವತಿಯಿಂದ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಶರಣಬಸವೇಶ್ವರ ಜಾತ್ರೆ ನಿಮಿತ್ತ ಆಯೋಜಿಸಲಾದ ಯೋಗ, ಪ್ರವಚನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೆಳಗ್ಗೆ 6 ಗಂಟೆಗೆ ಯೋಗ ತರಬೇತಿ ನೀಡಲಾಯಿತು. ರಾತ್ರಿ 7ರಿಂದ 8 ಗಂಟೆಯವರೆಗೆ ಪ್ರವಚನ ಹಾಗೂ ಪ್ರಸಾದ ಸೇವೆ ನಡೆಯಿತು. ಬೆಳಗ್ಗೆ ಲಿಂಗಪೂಜೆ ವಿಧಾನ, ಮಹತ್ವ ಹೇಳಿಕೊಡಲಾಯಿತು.
ಸೂರ್ಯಕಾಂತ ಕೋಬಾಳ, ಲಿಂಗರಾಜ ಮಲಕೂಡ, ವಿಜಯಕುಮಾರ ಮುಟ್ಟತ್ತಿ, ಡಾ.ವೀರಭದ್ರಪ್ಪ ಇಂಗಿನಶೆಟ್ಟಿ, ಶಿವಕುಮಾರ ಇಂಗಿನಶೆಟ್ಟಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.