ADVERTISEMENT

ಕುಂಚಾವರಂಗೆ ಪಿಯು ಕಾಲೇಜು ಮಂಜೂರಿಗೆ ಯತ್ನ: ಅವಿನಾಶ ಜಾಧವ

​ಪ್ರಜಾವಾಣಿ ವಾರ್ತೆ
Published 25 ಜನವರಿ 2022, 3:58 IST
Last Updated 25 ಜನವರಿ 2022, 3:58 IST
ಅವಿನಾಶ ಜಾಧವ
ಅವಿನಾಶ ಜಾಧವ   

ಚಿಂಚೋಳಿ: ಗಡಿಗ್ರಾಮ ಕುಂಚಾವರಂ ಮತ್ತು ತಾಲ್ಲೂಕಿನ ಹೃದಯಭಾಗ ಚಿಮ್ಮನಚೋಡ, ಐನಾಪುರ, ಮೋಘಾ, ರಟಕಲ್ ಗ್ರಾಮಗಳಲ್ಲಿ ಪಿಯು ಕಾಲೇಜು ಮಂಜೂರಾತಿ ಕುರಿತು ಜನರಿಂದ ಬೇಡಿಕೆ ಬಂದಿದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಆಧರಿಸಿ ಪ್ರೌಢ ಶಾಲೆ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆಎಂದು ಶಾಸಕ ಅವಿನಾಶ ಉಮೇಶ ಜಾಧವ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಂಚಾವರಂ ಗ್ರಾಮಕ್ಕೆ ಪಿಯು ಕಾಲೇಜು ಅಗತ್ಯವಿತ್ತು. ಆದರೆ ಮೊದಲನೆ ಪಟ್ಟಿಯಲ್ಲಿ ಇದು ಸೇರದಿರುವುದು ಪ್ರಾದೇಶಿಕ ಅಸಮತೋಲನಕ್ಕೆ ಕಾರಣವಾಗಿದೆ ಎಂದಾಗ 2ನೇ ಪಟ್ಟಿ ಶೀಘ್ರವೇ ಬಿಡುಗಡೆಯಾಗಲಿದೆ ಎಂದು ಪರೋಕ್ಷವಾಗಿ ಕುಂಚಾರಂಗೆ ಪಿಯು ಕಾಲೇಜು ಮಂಜೂರು ಮಾಡುವ ಇಂಗಿತ ವ್ಯಕ್ತಪಡಿಸಿದರು.

ಅಶೋಕ ಚವ್ಹಾಣ, ರಾಜು ಪವಾರ್, ಅಲ್ಲಮಪ್ರಭು ಹುಲಿ, ಹಣಮಂತ ಭೋವಿ, ಲಕ್ಷ್ಮಣ ಅವುಂಟಿ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.