ADVERTISEMENT

ಕಲಬುರ್ಗಿ: ಮನೆ ಕಳವು ಮಾಡುತ್ತಿದ್ದ ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 6:26 IST
Last Updated 17 ಜುಲೈ 2021, 6:26 IST
ಮನೆ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ವಿ.ವಿ. ಠಾಣೆಯ ಪೊಲೀಸರು ಬಂಧಿಸಿರುವುದು. ಡಿಸಿಪಿ ಶ್ರೀಕಾಂತ ಕಟ್ಟಿಮನಿ (ಮಧ್ಯದಲ್ಲಿ), ಪಿಐ ಶಿವಾನಂದ ಗಾಣಿಗೇರ, ಎಸಿ‍ಪಿ ಜೆ.ಎಚ್. ಇನಾಮದಾರ ಇದ್ದರು
ಮನೆ ಕಳ್ಳತನ ಮಾಡುತ್ತಿದ್ದ ಅಂತರರಾಜ್ಯ ಕಳ್ಳನನ್ನು ವಿ.ವಿ. ಠಾಣೆಯ ಪೊಲೀಸರು ಬಂಧಿಸಿರುವುದು. ಡಿಸಿಪಿ ಶ್ರೀಕಾಂತ ಕಟ್ಟಿಮನಿ (ಮಧ್ಯದಲ್ಲಿ), ಪಿಐ ಶಿವಾನಂದ ಗಾಣಿಗೇರ, ಎಸಿ‍ಪಿ ಜೆ.ಎಚ್. ಇನಾಮದಾರ ಇದ್ದರು   

ಕಲಬುರ್ಗಿ: ಇಲ್ಲಿನ ಅನ್ನಪೂರ್ಣೇಶ್ವರಿ, ಭಾಗ್ಯ ನಗರ ಕಾಲೊನಿಗಳಲ್ಲಿ ಮನೆ ಕಳವು ಮಾಡಿದ್ದ ಮಹಾರಾಷ್ಟ್ರದ ಯುವಕನನ್ನು ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಪರಬಾನಿ ಜಿಲ್ಲೆಯ ತುರುತ್ತರಿ ಖಯ್ಯುಮ ಅಲಿಯಾಸ್ ನಯ್ಯುಮ್ ಬೇಗ್ ಬಂಧಿತ ಆರೋಪಿ. ಆತನಿಂದ ₹ 3.10 ಲಕ್ಷ ಮೌಲ್ಯದ 80 ಗ್ರಾಂ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ನೃಪತುಂಗ ಕಾಲೊನಿಯಲ್ಲಿ ಸಂಶಯಾಸ್ಪದವಾಗಿ ಕೈಯಲ್ಲಿ ರಾಡು ಹಿಡಿದು ತಿರುಗಾಡುತ್ತಿದ್ದಾಗ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತೊಗರಿ ಕಳವು ಆರೋಪಿ ಬಂಧನ

ADVERTISEMENT

ಕಲಬುರ್ಗಿ: ನಗರದ ಹೊರವಲಯ ನಂದೂರ ಕೈಗಾರಿಕಾ ಪ್ರದೇಶದಲ್ಲಿ ದಾಲ್‍ಮಿಲ್‍ಗಳಿಂದ ತೊಗರಿ ಹಾಗೂ ತೊಗರಿ ಬೇಳೆ ಕಳ್ಳತನ ಮಾಡುತ್ತಿದ್ದ ಕುಖ್ಯಾತನನ್ನು ವಿಶ್ವವಿದ್ಯಾಲಯ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಚಿತ್ತಾಪುರ ತಾಲೂಕಿನ ಹೇರೂರ (ಕೆ) ಗ್ರಾಮದ ವಾಹನ ಚಾಲಕ ರಮೇಶ ನಾಟೀಕಾರ (19) ಎಂಬಾತನನ್ನು ಬಂಧಿಸಲಾಗಿದೆ. ಈತ ಕಳ್ಳತನ ಮಾಡಿದ್ದ 5 ಪ್ರಕರಣಗಳಲ್ಲಿ ಸಿಕ್ಕಿರುವ ಅಂದಾಜು ₹ 1.63 ಲಕ್ಷ ಮೌಲ್ಯದ ತೊಗರಿ ಹಾಗೂ ತೊಗರಿ ಬೇಳೆ ವಶಪಡಿಸಿಕೊಳ್ಳಲಾಗಿದೆ.

ವಿ.ವಿ. ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಿವಾನಂದ ಗಾಣಿಗೇರ, ಪೊಲೀಸ್ ಸಿಬ್ಬಂದಿಯಾದ ಲಿಂಬಾಜಿ ರಾಠೋಡ, ರಾಜು ಟಿಕಾಳೆ, ಸಂಜುಕುಮಾರ, ಅರವಿಂದ, ಸುಲ್ತಾನ, ಶಶಿಕಾಂತ, ಪ್ರೀತಮ್, ಈರಣ್ಣ, ಸುರೇಶ ದಾಳಿಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.