ಸೇಡಂ: ಚಿತ್ತಾಪುರದ ಮುತಗಾ ಗ್ರಾಮದ ನಿಜಶರಣ ಅಂಬಿಗರ ಚೌಡಯ್ಯನವರ ಮೂರ್ತಿ ಭಗ್ನಗೊಳಸಿರುವವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ನಿಜಶರಣ ಅಂಬಿಗರ ಚೌಡಯ್ಯ ಸೇವಾ ಚಾರಿಟೇಬಲ್ ಅಂಡ್ ವೆಲ್ ಫೇರ್ ಟ್ರಸ್ಟ್ ವತಿಯಿಂದ ಮಂಗಳವಾರ ಪ್ರತಿಭಟನೆ ನಡೆಯಿತು.
ಪಟ್ಟಣದ ಕೊತ್ತಲಬಸವೇಶ್ವರ ದೇವಾಲಯದಿಂದ ಚೌರಸ್ತಾ, ಕಿರಾಣ ಬಜಾರ, ಮುಖ್ಯರಸ್ತೆ, ಬಸ್ ನಿಲ್ದಾಣದ ಮೂಲಕ ಬಸವೇಶ್ವರ ವೃತ್ತದ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.
ತಹಶೀಲ್ದಾರ್ ಶ್ರೀಯಾಂಕ ಧನಶ್ರೀಯವರಿಗೆ ಮನವಿ ಸಲ್ಲಿಸಲಾಯಿತು.
ಟ್ರಸ್ಟ್ ಅಧ್ಯಕ್ಷ ಡಾ.ಶ್ರೀನಿವಾಸ ಮೊಕದಂ, ಉಪಾಧ್ಯಕ್ಷ ನಾಗಪ್ಪ ಕೊಳ್ಳಿ, ಸೋಮಶೇಖರ ಹೊಸಮನಿ, ಸಿದ್ದು ಬಾನರ್, ಭೀಮರಾಯ ಹಣಮನಹಳ್ಳಿ, ಬಿಜೆಪಿ ಮುಖಂಡ ಶಿವಕುಮಾರ ಪಾಟೀಲ್, ರಾಘವೇಂದ್ರ ಮೆಕ್ಯಾನಿಕ್, ಸತ್ಯಕುಮಾರ ಭಾಗೋಡಿ, ನಾಗೇಂದ್ರಪ್ಪ ಲಿಂಗಂಪಲ್ಲಿ, ರವೀಂದ್ರ ನಂದಿಗಾಮ, ಮಲ್ಲಿಕಾರ್ಜುನ ಮೆಕ್ಯಾನಿಕ್, ಚನ್ನಬಸಪ್ಪ ನಾಟಿಕಾರ್, ರುದ್ರು ಪಿಲ್ಲಿ, ಮಹಾದೇವ ಗೋಣಿ, ಡಾ.ಬಸವರಾಜ ಶಿರೋಳ್ಳಿ, ಮಲ್ಲಿಕಾರ್ಜುನ ಬೆಂಡ್ಲೆ, ಇಂದುಬಾಯಿ ಭಾಗೋಡಿ, ಡಾ.ರೇಖಾ ಮೊಕದಂ, ಜ್ಯೋತಿ ಮಾರ್ಲ, ರಾಮಲಿಂಗ ರೂದ್ನೂರ್, ಅರ್ಜುನ್ ಚನ್ನಕ್ಕಿ, ರಾಘವೇಂದ್ರ ಚನ್ನಕ್ಕಿ, ಮೌನೇಶ ಬೆನಕನಹಳ್ಳಿ, ರಾಮಚಂದ್ರ ಗುತ್ತೇದಾರ, ಚಂದ್ರಪ್ಪ ಪೆಂಚಂಪಳ್ಳಿ, ಜಗನ್ನಾಥ ಭಾಗೋಡಿ, ಶಿವಾನಂದ ಜಮಾದರ, ದೇವೇಂದ್ರಪ್ಪ ಎಳ್ಳಿ, ಸೇರಿದಂತೆ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.