ADVERTISEMENT

ಚಿಂಚೋಳಿ: ಸುಲೇಪೇಟ ತಂಡಕ್ಕೆ ಸೇವಾಲಾಲ್ ಟ್ರೋಫಿ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2022, 6:25 IST
Last Updated 21 ಫೆಬ್ರುವರಿ 2022, 6:25 IST
ಚಿಂಚೋಳಿ ತಾಲ್ಲೂಕು ಹೂವಿನಭಾವಿ ತಾಂಡಾದಲ್ಲಿಆಯೋಜಿಸಿದ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೋಡ್ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು
ಚಿಂಚೋಳಿ ತಾಲ್ಲೂಕು ಹೂವಿನಭಾವಿ ತಾಂಡಾದಲ್ಲಿಆಯೋಜಿಸಿದ ಕ್ರಿಕೆಟ್ ಟೂರ್ನಿಯಲ್ಲಿ ವಿಜೇತ ತಂಡಕ್ಕೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅನಿಲಕುಮಾರ ರಾಠೋಡ್ ಟ್ರೋಫಿ ಹಾಗೂ ನಗದು ಬಹುಮಾನ ವಿತರಿಸಿದರು   

ಚಿಂಚೋಳಿ: 'ಉತ್ತಮ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ’ ಎಂದು ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಅನಿಲಕುಮಾರ ರಾಠೋಡ್ ತಿಳಿಸಿದರು.

ತಾಲ್ಲೂಕಿನ ಹೂವಿನಭಾವಿ ತಾಲ್ಲೂಕಿನ ಹೂವಿನಭಾವಿ ಹೂಲಿ ನಾಯಕ ತಾಂಡಾದಲ್ಲಿ ಸೇವಾಲಾಲ್ ಮಹಾರಾಜ ಮತ್ತು ಜಗದಂಬಾ ದೇವಿಯ ಜಾತ್ರಾ ಮಹೋತ್ಸವ ಪ್ರಯುಕ್ತ ಆಯೋಜಿಸಿದ್ದ ಕ್ರಿಕೆಟ್ ಟೂರ್ನಿಯ ವಿಜೇತ ಸುಲೇಪೇಟ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು.

ತಂಡದ ನಾಯಕ ಜಗನ್ನಾಥ ಹಾಗೂ ಇತರರಿಗೆ ₹21ಸಾವಿರ ಮತ್ತು ಟ್ರೋಫಿಯನ್ನು ಅನಿಲಕುಮಾರ ರಾಠೋಡ್ ವಿತರಿಸಿದರು.

ADVERTISEMENT

ದ್ವಿತಿಯ ಬಹುಮಾನ ಪಡೆದ ಹೂವಿನಭಾವಿಯ ಸೇವಾಲಾಲ್ ಮಹಾರಾಜ ತಂಡದ ನಾಯಕ ಲೋಹಿತ್ ರಾಠೋಡ್ ಅವರಿಗೆ ಪೊಲೀಸ್ ಕಾನ್ಸ್‌ಸ್ಟೆಬಲ್ ಸಂಜೀವ ರಾಠೋಡ್ ಬಹುಮಾನ ವಿತರಿಸಿದರು.

75 ರನ್‌ ಗಳಿಸಿ ಪಂದ್ಯ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದ ಮದ್ದರಗಿಯ ಅನಿಲಕುಮಾರ ರಾಠೋಡ್ ಹಾಗೂ ಸರಣಿ ಪುರುಷೋತ್ತಮ ಬಹುಮಾನ ನೀಡಲಾಯಿತು. ವೀಕ್ಷಕ ವಿವರಣೆ ಮೋಹನ ರಾಠೋಡ್ ಮತ್ತು ಸತೀಶ ಚವ್ಹಾಣ ನಡೆಸಿಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.